‘ರಮೇಶ ಜಾರಕಿಹೊಳಿ ಅವರ ಘಟನೆಯಂತೆ ಇದುವರೆಗೆ ರಾಜ್ಯದಲ್ಲಿ 9 ಪ್ರಕರಣಗಳು ನಡೆದಿವೆ. ಒಬ್ಬರಿಗೂ ಇದುವರೆಗೆ ಶಿಕ್ಷೆಯಾಗಿಲ್ಲ. ಈ ಪ್ರಕರಣದಲ್ಲೂ ಯಾರಿಗಾದರೂ ಶಿಕ್ಷೆಯಾಗುತ್ತದೆ ಎಂದು ಅನಿಸುವುದಿಲ್ಲ. ರಮೇಶ ಜಾರಕಿಹೊಳಿ ಅವರು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ವಿರುದ್ಧ ಷಡ್ಯಂತ್ರ ಮಾಡಿರಬಹುದು ಅನಿಸುತ್ತೆ. ನನ್ನ ಬಳಿ ಸಿ.ಡಿ. ಇದೆ, ದಾಖಲೆಗಳಿವೆ ಎಂದು ಎಲ್ಲೂ ಹೇಳಿಲ್ಲ. ಮಾಧ್ಯಮಗಳಲ್ಲಿ ತಪ್ಪಾಗಿ ಪ್ರಕಟವಾಗಿದೆ. ಜಾರಕಿಹೊಳಿ ಪ್ರಕರಣದಲ್ಲಿ ಸಂತ್ರಸ್ತೆ ನನ್ನ ಬಳಿ ಬಂದರೆ ಅವರಿಗಾಗಿ ಹೋರಾಟ ನಡೆಸಲು ಸಿದ್ಧ’ ಎಂದು ಪ್ರತಿಕ್ರಿಯಿಸಿದರು.