ನಗರದ ಭರಮಪ್ಪ-ರಾಮಲಿ ಸ್ವಾಮಿ, ಚಿತ್ತವಾಡ್ಗಿ, ಚಪ್ಪರದಹಳ್ಳಿ, ಕಾರಿಗನೂರು, ತಾಲ್ಲೂಕಿನ ಮಲಪನಗುಡಿ, ವಡ್ಡರಹಳ್ಳಿ, ಕಮಲಾಪುರ ಸೇರಿದಂತೆ ವಿವಿಧ ಭಾಗಗಳಲ್ಲಿ ಕೆಂಡ ತುಳಿಯುವ ಮೂಲಕ ಭಕ್ತರು ಹರಕೆ ತೀರಿಸಿದರು. ನಂತರ ಪೀರಲ ದೇವರನ್ನು ಹೊತ್ತು ನಗರದಲ್ಲಿ ಮೆರವಣಿಗೆ ಮಾಡುವ ಮೂಲಕ ಅನ್ಯ ಭಾಗದ ದೇವರುಗಳನ್ನು ಪರಸ್ಪರ ಭೇಟಿ ಮಾಡಿಸಲಾಯಿತು.