ಕಲ್ಯಾಣ ಮಂಟಪ ಹಿಂಭಾಗದಲ್ಲಿ ಬಸವರಾಜ ಸಂಗಪ್ಪನವರ್ ಮನೆ ಇದೆ. ಅವರು ಕಾರಿನಲ್ಲಿ ಬಂದು, ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ತೆಗೆದು ಕಾಂಪೌಂಡ್ ಒಳಗೆ ನಿಲ್ಲಿಸುತ್ತಿದ್ದಾಗ ಕೂಗಳತೆ ದೂರದ ತೆಂಗಿನಮರಕ್ಕೆ ಸಿಡಿಲು ಬಡಿದು, ಬೆಂಕಿ ಹೊತ್ತಿಕೊಂಡು ಉರಿದಿದೆ. ಇದರಿಂದ ಬಸವರಾಜ ಅವರ ಬಲಗೈಗೆ ಸಿಡಿಲಿನ ಬಿಸಿ ತಾಗಿದೆ. ಬಳಿಕ ಅಗ್ನಿಶಾಮದ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು.