ಬಡತನ, ನಿರುದ್ಯೋಗ, ಸಾಂಸ್ಕೃತಿಕ ಅಧಃಪತನ, ಕೋಮುವಾದವನ್ನು ನೇತಾಜಿ ಅವರ ವಿಚಾರಧಾರೆಗಳ ಮೂಲಕ ಎದುರಿಸಬೇಕಿದೆ. ಧರ್ಮದ ಅಮಲು, ಹಣದ ಹಂಗಿನಲ್ಲಿ ಒಳಗಾಗದೆ ನೈಜ ಮನುಷ್ಯನಾಗಿ ಬದುಕಬೇಕಿದೆ. ನೇತಾಜಿಯವರು ಧರ್ಮ, ಕೋಮುವಾದದ ಕಟು ವಿರೋಧಿಯಾಗಿದ್ದರು. ಧರ್ಮವನ್ನು ರಾಜಕೀಯದಿಂದ ದೂರ ಇರಿಸಬೇಕು. ಧರ್ಮ ವ್ಯಕ್ತಿಯ ವೈಯಕ್ತಿಕ ಸಂಗತಿಯಾಗಿ ಇರಬೇಕು ಎನ್ನುವ ನಿಲುವನ್ನು ಹೊಂದಿದ್ದರು ಎಂದು ವಿವರಿಸಿದರು.