ಹೊಸಪೇಟೆ (ವಿಜಯನಗರ): ‘ನಗರಸಭೆಯ ಹಾಲಿ ಪೌರಾಯುಕ್ತ ಬಿ.ಎಸ್. ರಮೇಶ್ ಅವರು ಆರೋಗ್ಯ ಸರಿಯಿಲ್ಲವೆಂದು ದೀರ್ಘ ರಜೆ ಪಡೆದಿದ್ದಾರೆ. ಪೌರಾಯುಕ್ತರಿಂದಲೇ ಕೆಲಸ ಆಗಬೇಕು ಎಂದೇನಿಲ್ಲ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದು, ಶನಿವಾರದೊಳಗೆ ಹೊಸ ಪೌರಾಯುಕ್ತರು ಬರುತ್ತಾರೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.