ವಿದ್ಯಾರ್ಥಿಗಳಿಗೆ ಕೊಡುತ್ತಿರುವ ಆಹಾರ ಗುಣಮಟ್ಟದಿಂದ ಕೂಡಿಲ್ಲ. ಪದೇ ಪದೇ ಆಹಾರ, ಧಾನ್ಯಗಳಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತಿವೆ. ಅದನ್ನು ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತಿಂಗಳಲ್ಲಿ ಒಂದೆರಡು ಸಲ ಮಾಂಸದೂಟ ಕೊಡುತ್ತಾರೆ. ಅದು ಹೆಸರಿಗಷ್ಟೇ ಮಾಂಸದೂಟವಾಗಿರುತ್ತದೆ. ಪೌಷ್ಟಿಕಾಂಶಯುಕ್ತ ಆಹಾರವೇ ಕೊಡುವುದಿಲ್ಲ. ಸರ್ಕಾರದ ಅನುದಾನ ವಿದ್ಯಾರ್ಥಿಗಳಿಗೆ ಸರಿಯಾಗಿ ಬಳಕೆಯಾಗುತ್ತಿಲ್ಲ. ಕರೆಂಟ್ ಹೋದರೆ ಓದಲು ಸಮಸ್ಯೆಯಾಗುತ್ತದೆ. ಯು.ಪಿ.ಎಸ್. ಐದು ನಿಮಿಷವಷ್ಟೇ ನಡೆಯುತ್ತದೆ. ಮೇಲಧಿಕಾರಿಗಳು ಇದರತ್ತ ಗಮನಹರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.