ಅಲೋಪತಿ ವೈದ್ಯಕೀಯದ ಅಪಪ್ರಚಾರದಲ್ಲಿ ಮೂಲೆಗುಂಪಾಗಿದ್ದ ಭಾರತೀಯ ವೈದ್ಯ ಪದ್ಧತಿ, ಆಯುರ್ವೇದ, ಯೋಗ, ಪ್ರಾಣಾಯಾಮ, ಬುಡಕಟ್ಟು ಗಿಡಮೂಲಿಕೆ ಜ್ಞಾನ, ತಮ್ಮ ಅಸಲಿ ವೈದ್ಯಕೀಯ ಜ್ಞಾನವನ್ನು ಕೋವಿಡ್ ಸಂಕಟದ ಕಾಲದಲ್ಲಿ ಸಾಬೀತು ಮಾಡಿವೆ. ಭಾರತೀಯ ಜ್ಞಾನ ಪರಂಪರೆಯ-ತುಳಸಿ ಎಲೆ, ಅಲ್ಲ, ಬೆಲ್ಲ, ಶುಂಠಿ, ಮೆಣಸು, ಲವಂಗ, ಅಜ್ವಾನ, ಸೋಂಪು ತಮ್ಮ ವೈದ್ಯಕೀಯ ಉಪಯುಕ್ತತೆಯನ್ನು, ಕಾಲಾತೀತ ಗುಣವನ್ನು ದೃಢಪಡಿಸಿವೆ. ನಮ್ಮ ಪಠ್ಯಕ್ರಮ, ಪಠ್ಯಪುಸ್ತಕಗಳು ಈ ಕಾಲಾತೀತ ಸೌಖ್ಯದ ಗುಣ ಹೊಂದಿರುವ ಹಿತ್ತಲ ಗಿಡದ ಮದ್ದನ್ನು ಬಳಸಿಕೊಳ್ಳಬೇಕು. ಅದರ ಮುಖೇನ ನಮ್ಮ ಶೈಕ್ಷಣಿಕ ವಲಯದ ಅಸ್ತಿತ್ವ ಗಟ್ಟಿಗೊಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.