ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ವಿದ್ಯಾರ್ಥಿಗಳು ಅಮರಾವತಿಯ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್ಯಾಲಿ ನಡೆಸಿದರು. ‘ಮರಗಳನ್ನು ಉಳಿಸಿ’, ‘ಮರಗಳನ್ನು ಕತ್ತರಿಸಿದರೆ ನಮ್ಮ ಜೀವನ ಕತ್ತರಿಸಿದಂತೆ’ ಎಂಬ ಬರಹ ಹೊಂದಿದ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಪಾಲ್ಗೊಂಡಿದ್ದರು. ‘ನಿಲ್ಲಿಸಿ, ನಿಲ್ಲಿಸಿ ಮರಗಳ ಮಾರಣ ಹೋಮ ನಿಲ್ಲಿಸಿ’ ಎಂದು ಘೋಷಣೆ ಕೂಗುತ್ತ ಹೆಜ್ಜೆ ಹಾಕಿದರು.