‘ಪಂಪಾ ಮಹಾತ್ಮೆ ಎರಡೂ ಭಾಷೆಯಲ್ಲಿ ಪ್ರಕಟಿಸಲಾಗಿದೆ. ಅನೇಕ ಜನ ವಿದ್ವಾಂಸರು ಸೇರಿಕೊಂಡು ಈ ಪುಸ್ತಕ ಹೊರತರಲು ಶ್ರಮಿಸಿದ್ದಾರೆ. ಈ ಪುಸ್ತಕ ಪ್ರಕಟಣೆಗೆ ಉದ್ಯಮಿ ಎಚ್.ಜಿ. ರಂಗನಗೌಡ ನೆರವಾಗಿದ್ದಾರೆ. ಅವಿಭಜಿತ ಆಂಧ್ರ ಪ್ರದೇಶದ ತೆಲುಗು ಭಾಷಿಕರು, ಕರ್ನಾಟಕದ ಜನತೆಗೆ ಈ ಪುಸ್ತಕ ಪ್ರಯೋಜನವಾಗಲಿದೆ’ ಎಂದು ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.