‘ಡಿಸಿ, ಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಿ 20 ತೆಪ್ಪಗಳನ್ನು ವಶಕ್ಕೆ ಪಡೆದಿದ್ದೇವೆ. ಇನ್ನು ಕಾರ್ಯಾಚಣೆ ಮುಂದುವರಿದಿದ್ದು ಇನ್ನಷ್ಟು ತೆಪ್ಪಗಳು ಸಿಗುವ ಸಾಧ್ಯತೆಗಳಿವೆ. ನದಿ ತೀರದಲ್ಲಿದ್ದ ಮೋಟಾರ್ ಬೈಕ್ ಗಳನ್ನು ವಶಪಡಿಸಿಕೊಂಡಿದ್ದೇವೆ. ಈ ಕುರಿತು ಪ್ರಕರಣ ದಾಖಲಿಸಿ, ದಂಧೆಕೋರರ ಮೇಲೆ ಕ್ರಮಜರುಗಿಸುತ್ತೇವೆ’ ಎಂದು ತಹಶೀಲ್ದಾರ್ ಕೆ.ಶರಣಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.