ಉದ್ಯಮಿ ನೀಡಿದ ದೂರಿನ ನಂತರ 3 ತಂಡಗಳನ್ನು ರಚಿಸಲಾಗಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ದಾವಣೆಗೆರೆಯಲ್ಲಿ ಅಪಹರಣಕಾರರಾದ ಮಂಜುನಾಥ್(26), ಶಾಂತಕುಮಾರ್(24), ರಾಕೇಶ್(19), ಚಿರಾಗ್(19), ಶಿವಕುಮಾರ್(21), ರಾಹುಲ್(21), ಅಲ್ತಾಫ್(23) ಇವರುಗಳನ್ನು ಬಂಧಿಸಿ ಗುರುವಾರ ರಾತ್ರಿ ಪಟ್ಟಣದ ಠಾಣೆಗೆ ಕರೆತರಲಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಇವರಿಂದ ₹16.52ಲಕ್ಷ ಹಣ, ಕೃತ್ಯಕ್ಕೆ ಬಳಸಿದ ಕಾರು, 5ಮೊಬೈಲ್ ಗಳು, 2 ಮಚ್ಚು, 2 ಚಾಕು ವಶಪಡಿಸಿಕೊಳ್ಳಲಾಗಿದೆ ಎಂದರು.
ಡಿವೈಎಸ್ಪಿ ಜಿ.ಹರೀಶ್, ಕೊಟ್ಟೂರು ಸಿಪಿಐ ಸೋಮಶೇಖರ್ ಕೆಂಚರೆಡ್ಡಿ, ಹಗರಿಬೊಮ್ಮನಹಳ್ಳಿ ಸಿಪಿಐ ಟಿ.ಮಂಜಣ್ಣ, ಕೊಟ್ಟೂರು ಪಿಎಸ್ಐ ವಿಜಯ್ ಕೃಷ್ಣ, ಚಿತ್ತವಾಡ್ಗಿ ಪಿಎಸ್ಐ ಜಯಪ್ರಕಾಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.