ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗಾದಿಲಿಂಗಪ್ಪ ಅವರು ಭೇಟಿ ನೀಡಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ನಂತರ ಶೌಚಾಲಯ, ಬಾತ್ ರೂಮ್ನಲ್ಲಿ ಹಾಳಾಗಿದ್ದ ಟ್ಯಾಪ್ಗಳನ್ನು ದುರಸ್ತಿಗೊಳಿಸಿದರು. ಸ್ವಚ್ಛತೆಗೂ ಕ್ರಮ ಕೈಗೊಂಡರು.
‘ಸ್ವಚ್ಛತೆ ಮರೀಚಿಕೆ, ಕಳಪೆ ಆಹಾರ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಶುಕ್ರವಾರ (ಸೆ.23) ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳು ಈ ವಿಷಯವನ್ನು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.