ರೋಹಿತ್ ಚಕ್ರತೀರ್ಥ ಸಮಿತಿಯು ಪಠ್ಯ ಪರಿಷ್ಕರಣೆಯ ಹೆಸರಿನಲ್ಲಿ ಗೌತಮ ಬುದ್ಧ, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್, ಕುವೆಂಪು ಸೇರಿದಂತೆ ಅನೇಕ ಮಹಾನುಭಾವರಿಗೆ ಅವಮಾನ ಮಾಡಿದೆ. ಅಂಬೇಡ್ಕರ್ ಬಗೆಗಿನ ಹಲವು ವಿಷಯಗಳಿಗೆ ಕತ್ತರಿ ಹಾಕಿ, ವಿಷ ಕಾರಿದ್ದಾರೆ. ಇಂತಹ ಪಠ್ಯಪುಸ್ತಕಗಳನ್ನು ಶಾಲೆಗೆ ತಲುಪಿಸಿರುವುದು ಖಂಡನಾರ್ಹ ಎಂದು ಆಕ್ರೋಶ ಹೊರಹಾಕಿದರು.