ಇನ್ನೊಂದೆಡೆ ನಗರದ ಪುನೀತ್ ರಾಜಕುಮಾರ್ ವೃತ್ತದಲ್ಲಿ ಅವರ ಪುತ್ಥಳಿ ಪ್ರತಿಷ್ಠಾಪನೆಗೆ ಭರದ ಸಿದ್ಧತೆಗಳು ನಡೆದಿವೆ. ಗುರುವಾರ (ಮಾ.17) ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭೂಮಿ ಪೂಜೆ ನೆರವೇರಿಸುವರು.
ಪುನೀತ್ ಉತ್ಸವ:
ಫ್ರೆಂಡ್ಸ್ ಗ್ರುಪ್ ಹಂಪಿಯಿಂದ ಬುಧವಾರ ಹಂಪಿಯಲ್ಲಿ ಪುನೀತ್ ರಾಜಕುಮಾರ್ ಉತ್ಸವ ಆಚರಿಸಲಾಯಿತು. ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಎದುರು ಪುನೀತ್ ಭಾವಚಿತ್ರವಿಟ್ಟು ಪೂಜೆ ನೆರವೇರಿಸಲಾಯಿತು. ಬಳಿಕ ಚಿಣ್ಣರು ಕೇಕ್ ಕತ್ತರಿಸಿದರು. ರಥಬೀದಿಯುದ್ದಕ್ಕೂ ಅವರ ಭಾವಚಿತ್ರ ಹಾಕಲಾಗಿತ್ತು. ದೇಗುಲದಿಂದ ಪ್ರಕಾಶ್ ನಗರದ ವರೆಗೆ ಮೆರವಣಿಗೆ ಮಾಡಿದರು. ಪುನೀತ್ಗೆ ಜೈಕಾರ ಹಾಕಿದರು. ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ರವಿ ಬಾಬಾ, ರಾಮನ ಗೌಡ್ರು, ಎಸ್. ದೇವರಾಜು, ಎಚ್.ಗೋಪಿನಾಥ್, ಎಚ್. ಬಸವರಾಜ, ಗ್ಯಾನಿ ವೇಣು ತಳವಾರ, ಹನುಮಂತ, ಬ್ಯಾಂಕ್ ವಿರುಪಾಕ್ಷಿ, ಬಿ. ಶಿವು, ಸ್ವಾತಿ ಸಿಂಗ್, ರೂಪ, ರಾಜಣ್ಣ, ನಾಗರಾಜ್, ಎಚ್. ಹುಲಗಪ್ಪ ಹುಲಿಯ ಇದ್ದರು.