ವ್ರತಾಚರಣೆ ಭಾಗವಾಗಿ ಮಾ. 18ರ ವರೆಗೆ ಮಾಲೆಗಳನ್ನು ಧರಿಸಲಾಗುತ್ತದೆ. ಮಾಲಾಧಾರಿಗಳು ಕೇಸರಿ ಶಾಲು, ಕೇಸರಿ ಪಂಚೆ, ಕೇಸರಿ ಅಂಗಿ ಧರಿಸಿ ನಿತ್ಯ ಅಪ್ಪು ಭಾವಚಿತ್ರ ಇಟ್ಟು ಪೂಜಿಸಲಾಗುತ್ತದೆ. ಮಾ. 17ರಂದು ಡಾ. ಪುನೀತ್ ರಾಜಕುಮಾರ್ ವೃತ್ತದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಮಾ. 18ರಂದು ಬೆಂಗಳೂರಿನಲ್ಲಿರುವ ಪುನೀತ್ ಅವರ ಸಮಾಧಿ ಸ್ಥಳಕ್ಕೆ ತೆರಳಿ ಅಕ್ಕಿ, ಬೇಳೆ, ಎಣ್ಣೆ ಸಮರ್ಪಿಸಲಾಗುತ್ತದೆ. ಬಳಿಕ ಅದನ್ನು ಬಡವರಿಗೆ ಹಂಚಲಾಗುತ್ತದೆ.