ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ₹ 5 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಎಸ್‌ಡಿಎ

Last Updated 29 ಸೆಪ್ಟೆಂಬರ್ 2021, 10:20 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಎಸ್‌ಡಿಎ ಬಿಲಾಲ್‌ ಬಾಷಾ ಎಂಬುವರು ಬುಧವಾರ ₹5 ಸಾವಿರ ನಗದು ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ವಿಜಯನಗರ ಯುವಕರ ಬಳಗದಿಂದ ಪಟ್ಟಣದಲ್ಲಿ ಏಪ್ರಿಲ್‌ನಲ್ಲಿ ಅಂಗವಿಕಲರ ಆರೋಗ್ಯ ಶಿಬಿರ ಕಾರ್ಯಕ್ರಮ ನಡೆಸಿಕೊಡಲಾಗಿತ್ತು. ಬಳಗದ ಅಧ್ಯಕ್ಷ ಸೋಮಶೇಖರ್‌ ನಾಯಕ ಅವರು ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು, ಬಿಲ್‌ಗಳನ್ನು ಬಿಲಾಲ್‌ ಬಾಷಾ ಅವರಿಗೆ ಕೊಟ್ಟು ಹಣ ಪಾವತಿಗೆ ಮನವಿ ಮಾಡಿದ್ದರು. ಆದರೆ, ₹5 ಸಾವಿರ ಹಣ ಕೊಟ್ಟರೆ ಕೆಲಸ ಮಾಡಿಕೊಡುವುದಾಗಿ ಹೇಳಿದ್ದಾರೆ.

ಈ ಕುರಿತು ಸೋಮಶೇಖರ್‌ ನಾಯಕ ಎಸಿಬಿಗೆ ದೂರು ಕೊಟ್ಟಿದ್ದಾರೆ. ಬುಧವಾರ ಸೋಮಶೇಖರ್‌ ಅವರಿಂದ ಬಿಲಾಲ್‌ ಬಾಷಾ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಹಣದೊಂದಿಗೆ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಎಸಿಬಿ ಡಿವೈಎಸ್‌ಪಿ ಸೂರ್ಯನಾರಾಯಣ, ಸಿಪಿಐ ಪ್ರಭುಲಿಂಗ ಹಿರೇಮಠ, ಇನ್‌ಸ್ಪೆಕ್ಟರ್‌ ಸುಂದರೇಶ್‌ ಕಲ್ಯಾಣ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT