ತಾಲ್ಲೂಕಿನ ಕಲ್ಲಹಳ್ಳಿ, ರಾಜಾಪುರ ಗ್ರಾಮಸ್ಥರು ಗ್ರಾಮದ ದೇವರನ್ನು ಪೂಜೆ ಮಾಡಿ ನಗರದ ಬೈಪಾಸ್ ರಸ್ತೆಯ ಬಳಿ ಬೀಳ್ಕೊಟ್ಟರು. ಅಲ್ಲಿಂದ ನಗರದ ಊರಮ್ಮ ದೇವಸ್ಥಾನದ ವರೆಗೆ ಭಕ್ತರು ದೇವಿಯನ್ನು ಕರೆತಂದರು. ಕಾಯಿ, ಕರ್ಪೂರ, ನೈವೇದ್ಯ ಸಮರ್ಪಿಸಿದರು. ರಾಮ ಟಾಕೀಸ್ ಬಳಿ ದೇವಿಯನ್ನು ಕಣ್ತುಂಬಿಕೊಳ್ಳಲು ನೂರಾರು ಜನ ಸೇರಿದ್ದರು. ಬಳಿಕ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, ಅನಂತಶಯನಗುಡಿಗೆ ಕಳಿಸಿಕೊಡಲಾಯಿತು.