ತ್ಯಾಜ್ಯದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಗರಸಭೆ ಕ್ರಮ ಕೈಗೊಂಡಿದೆ. ಆದರೆ, ಬಡಾವಣೆಯ ಜನರ ಸಹಕಾರ ಸಿಗುತ್ತಿಲ್ಲ. ಮನೆ, ದೇವಸ್ಥಾನ, ಶಾಲೆಯವರು ತ್ಯಾಜ್ಯವನ್ನು ರಸ್ತೆ ಬದಿ ಸುರಿದು ಹೋಗುತ್ತಾರೆ. ಯಾವ ಮನೆಯ ಬಳಿ ಕಸ ಎಸೆದು ಹೋಗುತ್ತಾರೋ ಅವರಿಗೆ ದುರ್ಗಂಧದಿಂದ ಕಿರಿಕಿರಿ ಉಂಟಾಗುತ್ತಿದೆ. ಆದರೆ, ಜನರಿಗೆ ಅವರ ಸಮಸ್ಯೆ ಬೇಕಿಲ್ಲ.