ಮೃತ ಉಮೇಶ್ (17) ಬಳ್ಳಾರಿಯ ಎಸ್.ಜಿ. ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ. ‘ಮೊಬೈಲ್ನಲ್ಲಿ ಹೆಚ್ಚು ಕಾಲ ಕಳೆಯದೇ ಓದಿನ ಕಡೆಗೆ ಗಮನ ಹರಿಸಬೇಕೆಂದು ಪೋಷಕರು, ಉಮೇಶ್ಗೆ ಬುದ್ಧಿಮಾತು ಹೇಳಿದ್ದರು. ಅದರಿಂದ ನೊಂದು ಜು. 4ರಂದು ಉಮೇಶ್ ಮನೆ ಬಿಟ್ಟು ಹೋಗಿದ್ದ. ಬುಧವಾರ ಗ್ರಾಮದ ಹೊರವಲಯದ ಜಯಣ್ಣ ಗೌಡ್ರು ಎಂಬುವರ ಬಾವಿಯಲ್ಲಿ ಶವ ತೇಲಾಡುತ್ತಿತ್ತು. ಸ್ಥಳೀಯರು ವಿಷಯ ತಿಳಿಸಿದ ನಂತರ ಪೊಲೀಸರು ಬಂದು, ಮೃತನ ಗುರುತು ಪತ್ತೆ ಹಚ್ಚಿದ್ದಾರೆ. ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.