ನಗರದ ಮುನ್ಸಿಪಲ್ ಶಾಲೆ, ಸರ್ದಾರ್ ಪಟೇಲ್ ಪ್ರೌಢಶಾಲೆ, ದೀಪಾಯನ ಶಾಲೆ ಸೇರಿದಂತೆ ಎಲ್ಲ ಶಾಲೆಗಳ ಮೈದಾನದಲ್ಲಿ ವಿದ್ಯಾರ್ಥಿಗಳು ಅಂತರ ಕಾಯ್ದುಕೊಂಡು ನಿಲ್ಲುವುದಕ್ಕೆ ಮಾರ್ಕಿಂಗ್ ಮಾಡಲಾಗಿತ್ತು. ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಬಂದಿದ್ದ ವಿದ್ಯಾರ್ಥಿಗಳು ಮಾರ್ಕಿಂಗ್ ಮಾಡಿರುವ ಜಾಗದಲ್ಲಿ ಸಾಲಲ್ಲಿ ನಿಂತುಕೊಂಡು ಒಬ್ಬೊಬ್ಬರಾಗಿ ಕೇಂದ್ರದೊಳಗೆ ತೆರಳಿದರು.