<p>ಹೊಸಪೇಟೆ (ವಿಜಯನಗರ): ನಗರದ ಕ್ಯಾಥೋಲಿಕ್ ಚರ್ಚ್ ಬಾಗಿಲು ಮುರಿದು ದೇವರನ್ನು ಆರಾಧಿಸುವ ದೇವರ ಪ್ರಸಾದ ಇರಿಸುವ ಗೂಡನ್ನು ಕಳ್ಳರು ಕದ್ದೊಯ್ದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.</p>.<p>ಥೇಟ್ ಚಿನ್ನದ ಲೇಪನ ಮಾಡಿದಂತೆ ಗೂಡು ಭಾಸವಾಗುತ್ತದೆ. ಇದರ ಮೌಲ್ಯ ಅಂದಾಜು ₹50 ಸಾವಿರ ಎಂದು ಗೊತ್ತಾಗಿದೆ. ವ್ಯಕ್ತಿಯೊಬ್ಬರು ಅದನ್ನು ತಲೆ ಮೇಲೆ ಇಟ್ಟುಕೊಂಡು ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚರ್ಚ್ನಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದೆ.<br />ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಚರ್ಚ್ನಲ್ಲಿ ಈ ಹಿಂದೆಯೂ ಕಳ್ಳತನವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸಪೇಟೆ (ವಿಜಯನಗರ): ನಗರದ ಕ್ಯಾಥೋಲಿಕ್ ಚರ್ಚ್ ಬಾಗಿಲು ಮುರಿದು ದೇವರನ್ನು ಆರಾಧಿಸುವ ದೇವರ ಪ್ರಸಾದ ಇರಿಸುವ ಗೂಡನ್ನು ಕಳ್ಳರು ಕದ್ದೊಯ್ದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.</p>.<p>ಥೇಟ್ ಚಿನ್ನದ ಲೇಪನ ಮಾಡಿದಂತೆ ಗೂಡು ಭಾಸವಾಗುತ್ತದೆ. ಇದರ ಮೌಲ್ಯ ಅಂದಾಜು ₹50 ಸಾವಿರ ಎಂದು ಗೊತ್ತಾಗಿದೆ. ವ್ಯಕ್ತಿಯೊಬ್ಬರು ಅದನ್ನು ತಲೆ ಮೇಲೆ ಇಟ್ಟುಕೊಂಡು ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚರ್ಚ್ನಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದೆ.<br />ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಚರ್ಚ್ನಲ್ಲಿ ಈ ಹಿಂದೆಯೂ ಕಳ್ಳತನವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>