ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಮುಚ್ಚಿರುವ ಕಾರಣ ಭಕ್ತರು ಶಿಬಾರ ಕಟ್ಟೆಗೆ ಹಣ್ಣು, ಕಾಯಿ ನೈವೇದ್ಯ ಅರ್ಪಿಸಿ ಅಲ್ಲಿಂದಲೇ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಭಕ್ತರು ಕಟ್ಟೆ ಮೇಲೆ ಇರಿಸಿದ್ದ ಬಾಳೆ ಹಣ್ಣು, ಕೊಬ್ಬರಿಯ ಪ್ರಸಾದವನ್ನು ತಿನ್ನಲು ಕೋತಿಗಳು ಪೈಪೋಟಿಗಿಳಿದು ಶಿಬಾರದ ಮೇಲೆ ಹಾರಾಟ ನಡೆಸಿದಾಗ ತ್ರಿಶೂಲ ಮೇಲಿಂದ ಬಿದ್ದು ಭಗ್ನವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.