<p><strong>ಹೊಸಪೇಟೆ (ವಿಜಯನಗರ)</strong>: ತುಂಗಭದ್ರಾ ಅಣೆಕಟ್ಟೆಯ ಕ್ರೆಸ್ಟ್ಗೇಟ್ಗಳಿಗೆ ಚೈನ್ ಅಳವಡಿಕೆ ಕಾರ್ಯ ಜೂನ್ 20ರ ವೇಳಗೆ ಕೊನೆಗೊಳ್ಳಲಿದೆ, ಬದಲಿ ಅಣೆಕಟ್ಟೆ ಹಾಗೂ ಸಮಾನಾಂತರ ಜಲಾಶಯ ನಿರ್ಮಾಣದ ಕುರಿತು ಸಿಎಂ ಬಳಿಗೆ ಈ ಭಾಗದ ಶಾಸಕರ ನಿಯೋಗ ಕರೆದೊಯ್ದು ಮನವರಿಕೆ ಮಾಡುವ ಯೋಜನೆ ಇದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.</p><p>ಸೋಮವಾರ ತುಂಗಭದ್ರಾ ಅಣೆಕಟ್ಟೆಗೆ ಭೇಟಿ ನೀಡಿ, ಚೈನ್ ಅಳವಡಿಕೆ ಕಾರ್ಯ ಪರಿಶೀಲಿಸಿದ ಅವರು ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.</p><p>ನಾಲ್ಕು ವರ್ಷದ ಹಿಂದೆಯೇ ಜಲಾಶಯದ ಸಮಗ್ರ ಸುರಕ್ಷತಾ ಸರ್ವೇ ನಡೆಸಲಾಗಿದ್ದು, ಎಲ್ಲೆಲ್ಲಿ ನೀರಿನ ಸೋರಿಕೆ ಇತ್ತೋ ಅಲ್ಲೆಲ್ಲಾ ಈಗಾಗಲೇ 'ಗ್ರೌಟಿಂಗ್' ಹಾಗೂ ಇಂಜೆಕ್ಟ್ ಮಾಡುವ ಮೂಲಕ ದುರಸ್ತಿಪಡಿಸಲಾಗಿದೆ. ಇದರಿಂದಾಗಿ ಮುಂದಿನ 40 ವರ್ಷಗಳ ಕಾಲ ಜಲಾಶಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಟಿಬಿ ಬೋರ್ಡ್ ಅಧಿಕಾರಿಗಳು ತಾಂತ್ರಿಕ ಭರವಸೆ ನೀಡಿದ್ದಾರೆ. ಈ ವರದಿಯನ್ನು ಮಾತ್ರ ತುಂಗಭದ್ರಾ ಮಂಡಳಿ ಇದುವರೆಗೆ ಬಹಿರಂಗಪಡಿಸಿಲ್ಲ. ಈ ಬಗ್ಗೆ ಡಿಸಿಎಂ, ಮಂಡಳಿಯ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ವರದಿ ತರಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಶಾಸಕರು ಹೇಳಿದರು.</p>.<p><strong>ಪರ್ಯಾಯ ಜಲಾಶಯ</strong>: ಜಲಾಶಯದಲ್ಲಿ 30 ಟಿಎಂಸಿ ಅಡಿಯಷ್ಟು ಹೂಳು ತುಂಬಿದೆ, ಹೀಗಾಗಿ ಸಮಾನಾಂತರ ಜಲಾಶಯ ನಿರ್ಮಾಣ ಆಗಲೇಬೇಕಾಗಿದೆ. ಜತೆಗೆ ಈ ಅಣೆಕಟ್ಟೆಯ ಆಯಸ್ಸು ಸಹ ಇನ್ನು 30ರಿಂದ 40 ವರ್ಷಗಳಷ್ಟು ಮಾತ್ರ ಇರಬಹುದು. ಹೀಗಾಗಿ ಪರ್ಯಾಯ ಜಲಾಶಯದ ನಿರ್ಮಾಣ ಕುರಿತೂ ಈಗಲೇ ಚಿಂತನೆ ನಡೆಸಬೇಕಾಗಿದೆ. ಒಂದು ಸಮಾನಾಂತರ ಅಣೆಕಟ್ಟೆ ಅಥವಾ ಬದಲಿ ಅಣೆಕಟ್ಟೆ ನಿರ್ಮಾಣದ ಆರಂಭಿಕ ಹಂತದಲ್ಲೇ ಹಲವು ಇಲಾಖೆಗಳ ಅನುಮತಿ, ರಾಜ್ಯಗಳ ಒಪ್ಪಿಗೆಯಂತಹ ಪ್ರಕ್ರಿಯೆಗಳಿಗೆ ಬಹಳಷ್ಟು ಸಮಯ ಹಿಡಿಯುತ್ತದೆ. ಹೀಗಾಗಿ ಜಲಾಶಯ ವ್ಯಾಪ್ತಿಯ ಎಲ್ಲ ಶಾಸಕರು ಒಟ್ಟುಗೂಡಿ ಜಲಾಶಯ ನಿರ್ಮಾಣಕ್ಕೆ ಯೋಜನೆ ರೂಪಿಸಲಿದ್ದೇವೆ ಎಂದು ಗವಿಯಪ್ಪ ಹೇಳಿದರು.</p><p>ತುಂಗಭದ್ರಾ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಚಂದ್ರಶೇಖರ್, ಎಇಇಗಳಾದ ಕೆ.ಜ್ಞಾನೇಶ್ವರ, ಕಿರಣ್ ಇತರರು ಇದ್ದರು.</p><p><strong>ತಿಂಗಳಾಂತ್ಯಕ್ಕೆ 15 ಗೇಟ್ ಸಿದ್ಧ</strong></p><p>ಚೈನ್ ಅಳವಡಿಕೆ ವಿಳಂಬವಾಗಿದ್ದಕ್ಕೆ ಕಾರಣ ನೀಡಿದ ಶಾಸಕ ಗವಿಯಪ್ಪ, ಮೊದಲಿಗೆ ಕೆಲವೇ ಕೆಲವು ಚೈನ್ಗಳನ್ನು ಬದಲಿಸಲು ನಿರ್ಧರಿಸಲಾಗಿತ್ತು, ಡಿಸಿಎಂ ಅವರು ಮೇ 3ರಂದು ಅಣೆಕಟ್ಟೆಗೆ ಭೇಟಿ ನೀಡಿದ ಬಳಿಕ ಎಲ್ಲಾ ಗೇಟ್ಗಳಿಗೆ ಹೊಸ ಚೈನ್ ಅಳವಡಿಸಲು ಸೂಚನೆ ನೀಡಿದರು. ಹೀಗಾಗಿ ಚೈನ್ ಅಳವಡಿಕೆ ಸ್ವಲ್ಪ ವಿಳಂಬವಾಗಿದೆ. ಈಗಾಗಲೇ 2 ಗೇಟ್ಗಳಿಗೆ ಚೈನ್ ಅಳವಡಿಕೆ ಆಗಿದೆ, ತಿಂಗಳಾಂತ್ಯಕ್ಕೆ 15 ಗೇಟ್ಗಳಿಗೆ ಅಳವಡಿಕೆ ಆಗಲಿದೆ ಎಂದರು.</p>.<div><blockquote>ಅಣೆಕಟ್ಟೆಯ ಆಯಸ್ಸು100 ವರ್ಷ ಮಾತ್ರ ಎಂದು ಗೇಟ್ ತಜ್ಞ ಕನ್ಹಯ್ಯ ನಾಯ್ಡು ಅವರೇ ಹೇಳಿದ್ದಾರೆ, ತುಂಗಭದ್ರಾ ಅಣೆಕಟ್ಟೆಗೆ ಈಗಾಗಲೇ 73 ವರ್ಷವಾಗಿದೆ. ಹೀಗಾಗಿ ಬದಲಿ ಅಣೆಕಟ್ಟೆ ನಿರ್ಮಾಣದ ಬಗ್ಗೆ ಈಗಲೇ ಚಿಂತನೆ ಆರಂಭಿಸುವ ಅಗತ್ಯ ಇದೆ.</blockquote><span class="attribution">– ಎಚ್.ಆರ್.ಗವಿಯಪ್ಪ, ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ)</strong>: ತುಂಗಭದ್ರಾ ಅಣೆಕಟ್ಟೆಯ ಕ್ರೆಸ್ಟ್ಗೇಟ್ಗಳಿಗೆ ಚೈನ್ ಅಳವಡಿಕೆ ಕಾರ್ಯ ಜೂನ್ 20ರ ವೇಳಗೆ ಕೊನೆಗೊಳ್ಳಲಿದೆ, ಬದಲಿ ಅಣೆಕಟ್ಟೆ ಹಾಗೂ ಸಮಾನಾಂತರ ಜಲಾಶಯ ನಿರ್ಮಾಣದ ಕುರಿತು ಸಿಎಂ ಬಳಿಗೆ ಈ ಭಾಗದ ಶಾಸಕರ ನಿಯೋಗ ಕರೆದೊಯ್ದು ಮನವರಿಕೆ ಮಾಡುವ ಯೋಜನೆ ಇದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.</p><p>ಸೋಮವಾರ ತುಂಗಭದ್ರಾ ಅಣೆಕಟ್ಟೆಗೆ ಭೇಟಿ ನೀಡಿ, ಚೈನ್ ಅಳವಡಿಕೆ ಕಾರ್ಯ ಪರಿಶೀಲಿಸಿದ ಅವರು ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.</p><p>ನಾಲ್ಕು ವರ್ಷದ ಹಿಂದೆಯೇ ಜಲಾಶಯದ ಸಮಗ್ರ ಸುರಕ್ಷತಾ ಸರ್ವೇ ನಡೆಸಲಾಗಿದ್ದು, ಎಲ್ಲೆಲ್ಲಿ ನೀರಿನ ಸೋರಿಕೆ ಇತ್ತೋ ಅಲ್ಲೆಲ್ಲಾ ಈಗಾಗಲೇ 'ಗ್ರೌಟಿಂಗ್' ಹಾಗೂ ಇಂಜೆಕ್ಟ್ ಮಾಡುವ ಮೂಲಕ ದುರಸ್ತಿಪಡಿಸಲಾಗಿದೆ. ಇದರಿಂದಾಗಿ ಮುಂದಿನ 40 ವರ್ಷಗಳ ಕಾಲ ಜಲಾಶಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಟಿಬಿ ಬೋರ್ಡ್ ಅಧಿಕಾರಿಗಳು ತಾಂತ್ರಿಕ ಭರವಸೆ ನೀಡಿದ್ದಾರೆ. ಈ ವರದಿಯನ್ನು ಮಾತ್ರ ತುಂಗಭದ್ರಾ ಮಂಡಳಿ ಇದುವರೆಗೆ ಬಹಿರಂಗಪಡಿಸಿಲ್ಲ. ಈ ಬಗ್ಗೆ ಡಿಸಿಎಂ, ಮಂಡಳಿಯ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ವರದಿ ತರಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಶಾಸಕರು ಹೇಳಿದರು.</p>.<p><strong>ಪರ್ಯಾಯ ಜಲಾಶಯ</strong>: ಜಲಾಶಯದಲ್ಲಿ 30 ಟಿಎಂಸಿ ಅಡಿಯಷ್ಟು ಹೂಳು ತುಂಬಿದೆ, ಹೀಗಾಗಿ ಸಮಾನಾಂತರ ಜಲಾಶಯ ನಿರ್ಮಾಣ ಆಗಲೇಬೇಕಾಗಿದೆ. ಜತೆಗೆ ಈ ಅಣೆಕಟ್ಟೆಯ ಆಯಸ್ಸು ಸಹ ಇನ್ನು 30ರಿಂದ 40 ವರ್ಷಗಳಷ್ಟು ಮಾತ್ರ ಇರಬಹುದು. ಹೀಗಾಗಿ ಪರ್ಯಾಯ ಜಲಾಶಯದ ನಿರ್ಮಾಣ ಕುರಿತೂ ಈಗಲೇ ಚಿಂತನೆ ನಡೆಸಬೇಕಾಗಿದೆ. ಒಂದು ಸಮಾನಾಂತರ ಅಣೆಕಟ್ಟೆ ಅಥವಾ ಬದಲಿ ಅಣೆಕಟ್ಟೆ ನಿರ್ಮಾಣದ ಆರಂಭಿಕ ಹಂತದಲ್ಲೇ ಹಲವು ಇಲಾಖೆಗಳ ಅನುಮತಿ, ರಾಜ್ಯಗಳ ಒಪ್ಪಿಗೆಯಂತಹ ಪ್ರಕ್ರಿಯೆಗಳಿಗೆ ಬಹಳಷ್ಟು ಸಮಯ ಹಿಡಿಯುತ್ತದೆ. ಹೀಗಾಗಿ ಜಲಾಶಯ ವ್ಯಾಪ್ತಿಯ ಎಲ್ಲ ಶಾಸಕರು ಒಟ್ಟುಗೂಡಿ ಜಲಾಶಯ ನಿರ್ಮಾಣಕ್ಕೆ ಯೋಜನೆ ರೂಪಿಸಲಿದ್ದೇವೆ ಎಂದು ಗವಿಯಪ್ಪ ಹೇಳಿದರು.</p><p>ತುಂಗಭದ್ರಾ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಚಂದ್ರಶೇಖರ್, ಎಇಇಗಳಾದ ಕೆ.ಜ್ಞಾನೇಶ್ವರ, ಕಿರಣ್ ಇತರರು ಇದ್ದರು.</p><p><strong>ತಿಂಗಳಾಂತ್ಯಕ್ಕೆ 15 ಗೇಟ್ ಸಿದ್ಧ</strong></p><p>ಚೈನ್ ಅಳವಡಿಕೆ ವಿಳಂಬವಾಗಿದ್ದಕ್ಕೆ ಕಾರಣ ನೀಡಿದ ಶಾಸಕ ಗವಿಯಪ್ಪ, ಮೊದಲಿಗೆ ಕೆಲವೇ ಕೆಲವು ಚೈನ್ಗಳನ್ನು ಬದಲಿಸಲು ನಿರ್ಧರಿಸಲಾಗಿತ್ತು, ಡಿಸಿಎಂ ಅವರು ಮೇ 3ರಂದು ಅಣೆಕಟ್ಟೆಗೆ ಭೇಟಿ ನೀಡಿದ ಬಳಿಕ ಎಲ್ಲಾ ಗೇಟ್ಗಳಿಗೆ ಹೊಸ ಚೈನ್ ಅಳವಡಿಸಲು ಸೂಚನೆ ನೀಡಿದರು. ಹೀಗಾಗಿ ಚೈನ್ ಅಳವಡಿಕೆ ಸ್ವಲ್ಪ ವಿಳಂಬವಾಗಿದೆ. ಈಗಾಗಲೇ 2 ಗೇಟ್ಗಳಿಗೆ ಚೈನ್ ಅಳವಡಿಕೆ ಆಗಿದೆ, ತಿಂಗಳಾಂತ್ಯಕ್ಕೆ 15 ಗೇಟ್ಗಳಿಗೆ ಅಳವಡಿಕೆ ಆಗಲಿದೆ ಎಂದರು.</p>.<div><blockquote>ಅಣೆಕಟ್ಟೆಯ ಆಯಸ್ಸು100 ವರ್ಷ ಮಾತ್ರ ಎಂದು ಗೇಟ್ ತಜ್ಞ ಕನ್ಹಯ್ಯ ನಾಯ್ಡು ಅವರೇ ಹೇಳಿದ್ದಾರೆ, ತುಂಗಭದ್ರಾ ಅಣೆಕಟ್ಟೆಗೆ ಈಗಾಗಲೇ 73 ವರ್ಷವಾಗಿದೆ. ಹೀಗಾಗಿ ಬದಲಿ ಅಣೆಕಟ್ಟೆ ನಿರ್ಮಾಣದ ಬಗ್ಗೆ ಈಗಲೇ ಚಿಂತನೆ ಆರಂಭಿಸುವ ಅಗತ್ಯ ಇದೆ.</blockquote><span class="attribution">– ಎಚ್.ಆರ್.ಗವಿಯಪ್ಪ, ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>