ಗುಡೇಕೋಟೆ ಹೋಬಳಿಯ ಆರ್ಜುನಚಿನ್ನನಹಳ್ಳಿ ಸುತ್ತ ಮುತ್ತ ಸಂಜೆ 4 ಗಂಟೆ ಸುಮಾರಿಗೆ ಗುಡುಗು ಸಹಿತ ಮಳೆ ಆರಂಭವಾಗಿದೆ. ಈ ವೇಳೆ ಹೊಲದಲ್ಲಿನ ಮರದಡಿ ಕಟ್ಟಿಹಾಕಿದ್ದ ಗ್ರಾಮದ ಸುರೇಶ್ ಎಂಬ ರೈತನಿಗೆ ಸೇರಿದ ಎರಡು ಎತ್ತು ಹಾಗೂ ಒಂದು ಹಸುವಿಗೆ ಸಿಡಿಲು ಬಡಿದು, ಮೂರು ಜಾನುವಾರುಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.