ಕೊಟ್ಟೂರು: ತಾಲ್ಲೂಕಿನ ಉಜ್ಜಿನಿ ಪೀಠದ ಮರಳುಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯು ಎಂ.ಎಚ್. ಪ್ರಕಾಶ್ ರಾವ್ ಅವರನ್ನು ಬುಧವಾರ ಆಡಳಿತಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರಕಾಶ್ ರಾವ್ ಅವರು ಬಳ್ಳಾರಿ, ವಿಜಯನಗರ ಜಿಲ್ಲಾ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು. ಇನ್ಮುಂದೆ ದೇವಸ್ಥಾನದ ಆಡಳಿತ ನಿರ್ವಹಣೆ, ಲೆಕ್ಕಪತ್ರ ಇವರು ನೋಡಿಕೊಳ್ಳುವರು. ಬುಧವಾರ ಅಧಿಕಾರ ಸ್ವೀಕರಿಸುವಾಗ ದೇವಸ್ಥಾನದವರು ಆಕ್ಷೇಪಿಸಿದರು. ಆದರೆ, ಅದಕ್ಕವರು ಕಿವಿಗೊಡಲಿಲ್ಲ.