ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಪ್ರಥಮ ದರ್ಜೆ ಗುತ್ತಿಗೆದಾರನ ಮನೆ ಮೇಲೆ ಐ.ಟಿ. ದಾಳಿ

Last Updated 15 ಜೂನ್ 2022, 8:50 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಪ್ರಥಮ ದರ್ಜೆ ಸಿವಿಲ್‌ ಗುತ್ತಿಗೆದಾರ ಅಲ್ಲಂ ಸಣ್ಣ ಹನುಮಂತಪ್ಪ ಹಾಗೂ ಅವರ ಅಣ್ಣ ಅಲ್ಲಂ ಗೋವಿಂದಪ್ಪ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬುಧವಾರ ದಾಳಿ ನಡೆಸಿ, ಶೋಧ ಮುಂದುವರೆಸಿದ್ದಾರೆ.

ಸಣ್ಣ ಹನುಮಂತಪ್ಪ ಅವರಿಗೆ ಸೇರಿದ ನಗರದ ನೆಹರೂ ಕಾಲೊನಿ, ಬಳ್ಳಾರಿ, ಕುಡುತಿನಿ ಹಾಗೂ ಬೆಂಗಳೂರಿನ ಮನೆ, ಅವರ ಅಣ್ಣ ಅಲ್ಲಂ ಗೋವಿಂದಪ್ಪನವರಿಗೆ ಸೇರಿದ ಮನೆ ಮೇಲೂ ಐ.ಟಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಆದಾಯ ತೆರಿಗೆ ಇಲಾಖೆಯ 16 ತಂಡಗಳು ಏಕಕಾಲಕ್ಕೆ ಐದು ಸ್ಥಳಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಶೋಧ ನಡೆಸಿದ್ದಾರೆ. ಸಿವಿಲ್‌ ಗುತ್ತಿಗೆದಾರರಾಗಿರುವ ಸಣ್ಣ ಹನುಮಂತಪ್ಪ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಗೊತ್ತಾಗಿದೆ.

ನೆಹರೂ ಕಾಲೊನಿಯ ಸಣ್ಣ ಹನುಮಂತಪ್ಪ ಮನೆಯಲ್ಲಿ ಶೋಧ ಕಾರ್ಯ ಕೈಗೊಂಡಿರುವ ಐ.ಟಿ. ಇಲಾಖೆಯ ಅಧಿಕಾರಿಗಳನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಮಾಹಿತಿ ಕೊಡಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT