ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಹೆದ್ದಾರಿ: ಸಂಚಾರ ಬದಲಾವಣೆ

Published 8 ಜೂನ್ 2023, 5:40 IST
Last Updated 8 ಜೂನ್ 2023, 5:40 IST
ಅಕ್ಷರ ಗಾತ್ರ

ಹೊಸಪೇಟೆ: ತೋರಣಗಲ್ಲು ರೈಲು ನಿಲ್ದಾಣದಿಂದ ಜೆಎಸ್‌ಡಬ್ಲ್ಯು  1 ನಾರ್ತ್‌ ಯಾರ್ಡ್‌ಗೆ ಹೆಚ್ಚುವರಿ ಸಂಪರ್ಕವನ್ನು ರಾಷ್ಟ್ರೀಯ ಹೆದ್ದಾರಿ ಮೂಲಕ ಕಲ್ಪಿಸಬೇಕಿರುವುದರಿಂದ ಜೂನ್‌ 9ರ ಮಧ್ಯಾಹ್ನ 12ರಿಂದ 16ರ ಮಧ್ಯಾಹ್ನ 12 ಗಂಟೆವರೆಗೆ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ವಿಜಯನಗರ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಪ್ರಮುಖ ಸಂಪರ್ಕ ರಸ್ತೆ ರಾಷ್ಟ್ರೀಯ ಹೆದ್ದಾರಿ 67 ಆಗಿರುವುದರಿಂದ ವಾಹನ ಸಂಚಾರಕ್ಕೆ ಮೂರು ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗಿದೆ. ಕುರೆಕುಪ್ಪ ಕ್ರಾಸ್‌ನಿಂದ ಬಸಾಪುರ್‌–ವಡ್ಡು–ಸಂಡೂರ್‌ ತೋರಣಗಲ್ಲು ಬೈಪಾಸ್‌ ರಸ್ತೆ ಮಾರ್ಗವಾಗಿ ಬಳ್ಳಾರಿಗೆ ಹೋಗಬಹುದು. ಈ ಬದಲಿ ರಸ್ತೆಯಲ್ಲಿ ಬೈಕ್‌, ಸ್ಕೂಟರ್‌, ರಿಕ್ಷಾ,ಕಾರುಗಳಿಗೆ ಮಾತ್ರ ಸಂಚರಿಸಬಹುದಾಗಿದೆ.

ಕಾಕುಬಾಳು ಕ್ರಾಸ್‌ನಿಂದ ಕಾಕುಬಾಳ್‌–ಜೋಗ–ತಾಳೂರು–ಸಂಡೂರು–ತೋರಣಗಲ್ಲು ರಸ್ತೆ ಮಾರ್ಗವಾಗಿ ಬಸ್‌ಗಳು ಸಂಚರಿಸಬಹುದು.  ಹೊಸಪೇಟೆಯ ವಿರೂಪಾಕ್ಷನಾಯಕ ವೃತ್ತ–ರಾಜಾಪುರ–ಕಲ್ಲಹಳ್ಳಿ–ಜೈಸಿಂಗ್‌ಪುರ–ಸಿದ್ಧಾಪುರ–ಸುಶೀಲಾನಗರ–ಸಂಡೂರು ಬೈಪಾಸ್–ಸಂಡೂರು–ತೋರಣಗಲ್ಲು ರಸ್ತೆ ಮಾರ್ಗದಲ್ಲಿ ಇತರ ಸರಕು ಸಾಗಣೆ ವಾಹನಗಳು ತೆರಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT