ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಪ್ರಮುಖ ಸಂಪರ್ಕ ರಸ್ತೆ ರಾಷ್ಟ್ರೀಯ ಹೆದ್ದಾರಿ 67 ಆಗಿರುವುದರಿಂದ ವಾಹನ ಸಂಚಾರಕ್ಕೆ ಮೂರು ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗಿದೆ. ಕುರೆಕುಪ್ಪ ಕ್ರಾಸ್ನಿಂದ ಬಸಾಪುರ್–ವಡ್ಡು–ಸಂಡೂರ್ ತೋರಣಗಲ್ಲು ಬೈಪಾಸ್ ರಸ್ತೆ ಮಾರ್ಗವಾಗಿ ಬಳ್ಳಾರಿಗೆ ಹೋಗಬಹುದು. ಈ ಬದಲಿ ರಸ್ತೆಯಲ್ಲಿ ಬೈಕ್, ಸ್ಕೂಟರ್, ರಿಕ್ಷಾ,ಕಾರುಗಳಿಗೆ ಮಾತ್ರ ಸಂಚರಿಸಬಹುದಾಗಿದೆ.