ಕಥೆ, ಕವನ ಸ್ಪರ್ಧೆ:
ಬ್ಯಾಂಕಿಂಗ್ ಕ್ಷೇತ್ರದ ತಜ್ಞರಾಗಿದ್ದ ಕೆ. ಉಮಾಶಂಕರ ಬೋಸ್ ಸ್ಮರಣಾರ್ಥ ಕಥಾ ಸ್ಪರ್ಧೆ ಆಯೋಜಿಸಲಾಗಿದೆ. ‘ಸಂಧ್ಯಾಕಾಲ’ ಸ್ಪರ್ಧೆಯ ಶೀರ್ಷಿಕೆ. ಕೆ.ಆರ್. ರಂಗನಾಥ ಅವರ ನೆನಪಿನಲ್ಲಿ ‘ವಿಕಾಸ’ ಕವನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕಥೆ ಮೂರು ಸಾವಿರ ಪದ ಮೀರಬಾರದು. ಕವನ 15 ರಿಂದ 30 ಸಾಲುಗಳ ಒಳಗಿರಬೇಕು. ಆಸಕ್ತರು ಕಥೆ, ಕವನಗಳನ್ನು ಜು. 25ರೊಳಗೆ vikasbank.silverjubilee@gmail.com ಇಮೇಲ್ ಕಳಿಸಬಹುದು ಅಥವಾ ವಿಕಾಸ ಬ್ಯಾಂಕ್ ರಜತ ಮಹೋತ್ಸವ ಸಮಿತಿ, ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಕೇಂದ್ರ ಕಚೇರಿ, ಸ್ಟೇಶನ್ ರಸ್ತೆ, ಹೊಸಪೇಟೆ–583201 ಕಳಿಸಬಹುದು ಎಂದರು.
ಕಥಾ ಸ್ಪರ್ಧೆಯಲ್ಲಿ ₹10 ಸಾವಿರ ಪ್ರಥಮ, ₹5 ಸಾವಿರ ದ್ವಿತೀಯ, ₹2,500 ತೃತೀಯ ಹಾಗೂ ಇಬ್ಬರಿಗೆ ತಲಾ ₹1 ಸಾವಿರ ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಕವನ ಸ್ಪರ್ಧೆಯಲ್ಲಿ ಪ್ರಥಮ ಬಂದವರಿಗೆ ₹5 ಸಾವಿರ, ₹3 ಸಾವಿರ ದ್ವಿತೀಯ, ₹2 ಸಾವಿರ ತೃತೀಯ ಹಾಗೂ ಇಬ್ಬರಿಗೆ ತಲಾ ಒಂದು ಸಾವಿರ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಬ್ಯಾಂಕಿನ ನಿರ್ದೇಶಕರಾದ ಎಂ. ವೆಂಕಪ್ಪ, ವ್ಯವಸ್ಥಾಪಕ ಗವಿಸಿದ್ದಪ್ಪ, ಜಂಪ್ ರೋಪ್ ಅಸೋಸಿಯೇಶನ್ ಕಾರ್ಯದರ್ಶಿ ಅಬ್ದುಲ್ ರಜಾಕ್, ನಿರ್ದೇಶಕ ಅನಂತ ಜೋಶಿ ಇದ್ದರು.