‘ಹತ್ತು ವರ್ಷಗಳಿಂದ ಗ್ರಾಮಕ್ಕೆ ಭೇಟಿ ನೀಡಿಲ್ಲ. ಭಾರಿ ಮಳೆಗೆ ಅಪಾರ ಬೆಳೆ ಹಾನಿಯಾದಾಗಲೂ ಬಂದಿರಲಿಲ್ಲ. ಈಗೇಕೇ ಬಂದಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ‘ಕೆಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿರುವೆ. ಉಳಿದ ಬೇಡಿಕೆಗಳನ್ನು ಬರುವ ದಿನಗಳಲ್ಲಿ ಈಡೇರಿಸಲಾಗುವುದು’ ಎಂದು ಶಾಸಕರು ಹೇಳಿದರು. ಆದರೆ, ಅದಕ್ಕೆ ಗ್ರಾಮಸ್ಥರು ಸುಮ್ಮನಾಗಲಿಲ್ಲ. ಬಳಿಕ ಪೊಲೀಸರು, ಗ್ರಾಮದ ಹಿರಿಯರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.