ತಾಲ್ಲೂಕಿನ ಹಂಪಿ, ತಳವಾರಘಟ್ಟದಲ್ಲಿ ಬಾಳೆ, ಭತ್ತದ ಗದ್ದೆಗಳಿಗೆ ನುಗ್ಗಿದ ನೀರು ನಿಧಾನಕ್ಕೆ ಹೊರ ಹೋಗುತ್ತಿದೆ. ಆದರೆ, ಈಗಲೂ ಹಂಪಿ ಪುರಂದರದಾಸರ ಮಂಟಪ, ಚಕ್ರತೀರ್ಥ, ಕೋದಂಡರಾಮ ದೇವಸ್ಥಾನ, ಕರ್ಮ ಮಂಟಪ, ಸ್ನಾನಘಟ್ಟ, ವಿಜಯನಗರ ಕಾಲದ ಕಾಲು ಸೇತುವೆ ಸ್ಮಾರಕಗಳು ಮುಳುಗಿದ ಸ್ಥಿತಿಯಲ್ಲೇ ಇವೆ. ಗುರುವಾರವೂ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯ ಸುಳಿವು ಇರಲಿಲ್ಲ. ಬೆಳಿಗ್ಗೆಯಿಂದ ಕಾರ್ಮೋಡ ಇತ್ತು. ಆಗಾಗ ನಗರದಲ್ಲಿ ತುಂತುರು ಮಳೆಯಾಯಿತು.