ಎರಡು ಅರವಳಿಕೆ ನೀಡಿದ ನಂತರ, ಜಿಂದಾಲ್ನಿಂದ ಕ್ರೇನ್ ತರಿಸಿ, ಕರಡಿಯನ್ನು ಸುರಕ್ಷಿತವಾಗಿ ಕೆಳಗಿಳಿಸಿ, ಕಾಡಿಗೆ ಕೊಂಡೊಯ್ದರು. ಆಗ ಸಮಯ ಮಧ್ಯಾಹ್ನ 2 ಗಂಟೆಯಾಗಿತ್ತು. ಕರಡಿ ರಕ್ಷಣೆಗೆ ನಡೆದ ಕಾರ್ಯಾಚರಣೆ ನೋಡಲು ನೂರಾರು ಜನ ಸ್ಥಳದಲ್ಲಿ ನೆರೆದಿದ್ದರು.
‘ನಮ್ಮ ವೈದ್ಯರು ಹಾಗೂ ಅವರ ತಂಡ ಸೇರಿಕೊಂಡು ಕುರೇಕುಪ್ಪದಲ್ಲಿ ಹೆಣ್ಣು ಕರಡಿಯನ್ನು ರಕ್ಷಿಸಿದ್ದಾರೆ’ ಎಂದು ವಾಜಪೇಯಿ ಉದ್ಯಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್. ಕಿರಣ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.