ಅದಕ್ಕೆ ಕುಲಪತಿ ಪ್ರೊ. ಸ.ಚಿ. ರಮೇಶ ಪ್ರತಿಕ್ರಿಯಿಸಿ, ‘ಮಲ್ಲಿಕಾರ್ಜುನಗೌಡ ವರ್ಗಾವಣೆ ಆದೇಶ ರದ್ದುಪಡಿಸುವುದಿಲ್ಲ. ಠಾಣೆಗೆ ಕೊಟ್ಟಿರುವ ದೂರು ವಾಪಸ್ ಪಡೆಯುವುದಿಲ್ಲ’ ಎಂದರು. ಇದಕ್ಕೆ ಇಬ್ಬರೂ ಸದಸ್ಯರು ಸಿಟ್ಟಿಗೆದ್ದರು. ಈ ವೇಳೆ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಇತರೆ ಸದಸ್ಯರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ‘ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ, ಸದಸ್ಯ ಜೈಭೀಮ್ ಕಟ್ಟಿ, ಪ್ರಾಧ್ಯಾಪಕ ಕೆ.ಎಂ. ಮೇತ್ರಿ ಅವರನ್ನು ಒಳಗೊಂಡ ಸಮಿತಿ ರಚಿಸಿ, ತನಿಖೆ ನಡೆಸಲು ಸಭೆ ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.