ವಿಜಯನಗರ (ಹೊಸಪೇಟೆ): ಯುವಧ್ವನಿ ಹಾಗೂ ಯುವಜನ ಒಕ್ಕೂಟದ ವತಿಯಿಂದ ನಗರದ ವಿವಿಧ ಕಾಲೇಜುಗಳಲ್ಲಿ ಸೋಮವಾರ ಯುವಜನ ಸಬಲೀಕರಣ ನಿಗಮ ಸ್ಥಾಪನೆ ವಿಷಯವಾಗಿ ಜಾಗೃತಿ ಶಿಬಿರ ನಡೆಸಲಾಯಿತು.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಮುನ್ಸಿಪಲ್ ಕಾಲೇಜಿನಲ್ಲಿ ಶಿಬಿರ ನಡೆಯಿತು. ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿದ ಯುವಜನತೆಯನ್ನು ಸಮರ್ಥರನ್ನಾಗಿಲು ಕೌಶಲ ತರಬೇತಿ ಮತ್ತು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಲು ಯುವಜನ ಸಬಲೀಕರಣ ನಿಗಮದ ಅವಶ್ಯಕತೆ ಕುರಿತು ಯುವಧ್ವನಿ ಸದಸ್ಯರು ಮಾಹಿತಿ ನೀಡಿದರು.
ಯುವಜನರ ಹಕ್ಕುಗಳು, ಸಮಸ್ಯೆ ಮತ್ತು ಸವಾಲುಗಳ ಕುರಿತಂತೆ ಯುವಧ್ವನಿಯ ಸದಸ್ಯರಾದ ಸುನಿತಾ, ಶಕೀಲ್ ಮತ್ತು ಪರಶುರಾಮ ಜಾಗೃತಿ ಮೂಡಿಸಿದರು.