ತಾಲ್ಲೂಕಿನ ಧರ್ಮಸಾಗರದ ಗಂಗಾಧರ್ (34) ಮೃತ ವ್ಯಕ್ತಿ. ‘ಮಂಗಳವಾರ ಸಂಜೆ 5.30ರಿಂದ 6ಗಂಟೆಯ ನಡುವೆ ಬಳ್ಳಾರಿ ರಸ್ತೆಯ ಯಶ್ ಬಾರ್ನಲ್ಲಿ ಗಂಗಾಧರ್ ಇನ್ನಿಬ್ಬರೊಂದಿಗೆ ಮದ್ಯ ಸೇವಿಸುತ್ತ, ಊಟ ಮಾಡುತ್ತ ಕುಳಿತಿದ್ದರು. ಈ ವೇಳೆ ಅವರೊಂದಿಗೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಇಬ್ಬರ ಪೈಕಿ ಒಬ್ಬ ವ್ಯಕ್ತಿ ಚಾಕುವಿನಿಂದ ಗಂಗಾಧರ್ ಎಡಭಾಗದಲ್ಲಿ ಎದೆಗೆ ಇರಿದಿದ್ದಾರೆ. ತೀವ್ರ ರಕ್ತಸ್ರಾವವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಂಗಾಧರ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.