ಮಳೆಯಿಂದ ಅನೇಕ ಕುರಿ ಮೇಕೆಗಳು ಪ್ರವಾಹದಲ್ಲಿ ಜೀವ ಕಳೆದುಕೊಂಡವು. ಆದರೆ, ಸರ್ಕಾರದ ಪರಿಹಾರ ದೊರೆತಿಲ್ಲ. ರಸ್ತೆ ಅಪಘಾತ, ರೈಲು ಡಿಕ್ಕಿ, ಕಳವು, ಕಾಡು ನಾಯಿಗಳ ಉಪಟಳ, ಕಳ್ಳತನ, ವಿಷ ಮಿಶ್ರಿತ ನೀರು ಕುಡಿದು, ವಿಷ ಆಹಾರ ತಿಂದು ಕುರಿಗಳು ಜೀವ ಕಳೆದುಕೊಂಡಿವೆ. ಆದರೆ, ಇದುವರೆಗೂ ಒಬ್ಬ ಕುರಿಗಾರನಿಗೂ ಸರ್ಕಾರದ ಸಹಾಯ ಧನ ಸಿಕ್ಕಿಲ್ಲ ಎಂದು ದೂರಿದೆ.