ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ, ಪರಿಸರ, ವಿಸ್ಮಯ ಅರಿಯಲು ಸಲಹೆ: ಎಂ.ಬಿ.ಪಾಟೀಲ

ಡಾ.ಸಿ.ಆರ್.ಬಿದರಿ ಪುಣ್ಯಸ್ಮರಣೆ ಅಂಗವಾಗಿ ವನ್ಯಜೀವಿಗಳ ಛಾಯಚಿತ್ರ ಕುರಿತು ವೆಬಿನಾರ್
Last Updated 2 ಫೆಬ್ರುವರಿ 2021, 12:37 IST
ಅಕ್ಷರ ಗಾತ್ರ

ವಿಜಯಪುರ: ವನ್ಯಜೀವಿಗಳ ಕುರಿತು ಪ್ರತಿಯೊಬ್ಬರು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ಪ್ರಕೃತಿ, ಪರಿಸರ, ವಿಸ್ಮಯಗಳನ್ನು ಅರಿಯಲು ಸಾಧ್ಯ ಎಂದು ಎಂದು ಶಾಸಕ ಎಂ.ಬಿ.ಪಾಟೀಲ ಹೇಳಿದರು.

ಬಿ.ಎಲ್.ಡಿ.ಇ ಸಂಸ್ಥೆ ಆಶ್ರಯದಲ್ಲಿ ಕೋಟಿವೃಕ್ಷ ಅಭಿಯಾನ ಹಾಗೂ ಎಸ್.ಪಿ.ಪಿ.ಎ ಜಂಟಿಯಾಗಿ ಡಾ.ಸಿ.ಆರ್.ಬಿದರಿಯವರ ಪುಣ್ಯಸ್ಮರಣೆ ನಿಮಿತ್ತ ವನ್ಯಜೀವಿಗಳ ಛಾಯಚಿತ್ರಗಳ ಕುರಿತು ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

ವನ್ಯಜೀವಿಗಳ ಚಿತ್ರಗಳನ್ನು ಸೆರೆ ಹಿಡಿಯುವ ಅಪರೂಪದ ಕಲೆಯನ್ನು ಯುವ ಛಾಯಾಗ್ರಾಹಕರು ಅಳಡಿಸಿಕೊಳ್ಳಬೇಕು ಎಂದರು.

ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಬೇಕು. ಗಿಡಮರಗಳು ಹೆಚ್ಚಾದಂತೆ ಪಶು-ಪಕ್ಷಿಗಳ ಸಂತತಿ ಬೆಳೆಯುವುದು, ಇದರಿಂದ ಜೀವವೈವಿಧ್ಯದಲ್ಲಿ ಸಮತೋಲನ ಸೃಷ್ಠಿ ಆಗಲಿದೆ ಎಂದರು.

ಎಸ್‍ಪಿಪಿಎ ಸ್ಥಾಪಕ, ಛಾಯಾಗ್ರಾಹಕ ಧ್ರುವ ಎಂ.ಪಾಟೀಲ್ ಮಾತನಾಡಿ, ಕಬಿನಿ ಅರಣ್ಯ ಪ್ರದೇಶದಲ್ಲಿ ಅಪರೂಪದ ಕಪ್ಪುಚಿರತೆ ಸೆರೆಹಿಡಿದ್ದರ ಮಾಹಿತಿ ಹಾಗೂ ಚಿತ್ರಗಳು ಮತ್ತು ಕ್ಯಾಮೆರಾ ಬಳಕೆಯ ಕುರಿತು ವೆಬಿನಾರ್‌ನಲ್ಲಿ ತಿಳಿಸಿದರು.

ಪ್ರತಿ ವರ್ಷ ಡಾ.ಸಿ.ಆರ್.ಬಿದರಿಯವರ ಪುಣ್ಯಸ್ಮರಣೆಯಂದು ಕ್ರೀಡೆಯನ್ನು ಏರ್ಪಡಿಸಲಾಗುತ್ತಿತ್ತು. ಆದರೆ, ಕೋವಿಡ್ ಕಾರಣದಿಂದ ಈ ವರ್ಷ ಸಾಧ್ಯವಾಗಿಲ್ಲ ಎಂದರು.

ಆಶಾ ಎಂ.ಪಾಟೀಲ್ ಮಾತನಾಡಿ, ಡಾ.ಸಿ.ಆರ್.ಬಿದರಿಯರು ಓಟಗಾರ ಮಿಲ್ಕಾಸಿಂಗ್ ಅವರೊಂದಿಗೆ ಓಲಂಪಿಕ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದನ್ನು ನೆನೆಪಿಸಿಕೊಂಡರು.

ಸ್ಪರ್ಧೆ: ಬಿ.ಎಲ್.ಡಿ.ಇ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗಾಗಿ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಿದ್ದು, ತಾವುಗಳು ಸೆರೆಹಿಡಿದ ಚಿತ್ರಗಳನ್ನು ಎಡಿಟ್ ಮಾಡಿ ಅಥವಾ ಎಡಿಟ್ ಮಾಡದೆ ಕೂಡhttp://bit.ly/sppaphoto ವೆಬ್ ಲಿಂಕ್‍ನಲ್ಲಿ ಫೆ.6 ರೊಳಗಾಗಿ ಅಪಲೊಡ್ ಮಾಡಬೇಕು. ಫೆ. 9ರಂದು ವಿಜೇತರ ಹೆಸರುಗಳನ್ನು ತಿಳಿಸಲಾಗುವುದು ಎಂದರು.

ಪ್ರಥಮ ಹತ್ತು ಸ್ಥಾನ ಪಡೆದವರಿಗೆ ಡಾ.ಎಂ.ಬಿ.ಪಾಟೀಲ್‍ ಅವರ ಹಸ್ತಾಕ್ಷರವುಳ್ಳ ಟಿ-ಶರ್ಟ್ ಹಾಗೂ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹ 10ಸಾವಿರ ನಗದು, ದ್ವಿತೀಯ ₹ 5 ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ ₹3 ಸಾವಿರ ನಗದು ಪುರಸ್ಕಾರ ನೀಡಲಾಗುವದು ಎಂದು ತಿಳಿಸಿದರು.

ಆಡಳಿತಾಧಿಕಾರಿ ಡಾ.ಆರ್.ವಿ.ಕುಲಕರ್ಣಿ, ಪ್ರೊ.ಮುರುಗೇಶ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT