ವಿಜಯಪುರ: ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅರುಣಾ ಬಿ. ಪಾಟೀಲ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಕೃಷಿ ಅಧಿಕಾರಿ ಅರುಣಾ ಪಾಟೀಲ ಅವರ ಅನಧಿಕೃತ ಗೈರು ಹಾಜರಿಯಾದ ಆರೋಪದ ಮೇರೆಗೆ ಸೇವೆಯಿಂದ ತೆಗೆದು ಹಾಕಿ, ದಂಡ ವಿಧಿಸಿ ಕೃಷಿ ಆಯುಕ್ತರು ಆದೇಶಿಸಿದ್ದಾರೆಎಂದು ಮುದ್ದೇಬಿಹಾಳ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.