ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣಿವೀರಭದ್ರೇಶ್ವರ ದೇವಸ್ಥಾನ: ₹9.45 ಲಕ್ಷ ಹುಂಡಿ ಸಂಗ್ರಹ

Last Updated 8 ಜನವರಿ 2021, 6:58 IST
ಅಕ್ಷರ ಗಾತ್ರ

ಕಾಳಗಿ: ತಾಲ್ಲೂಕಿನ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನದಲ್ಲಿ ಒಂದು ವರ್ಷದಿಂದ ಸಂಗ್ರಹವಾಗಿದ್ದ ಭಕ್ತರ ಹುಂಡಿ ಹಣವನ್ನು ಗುರುವಾರ ಎಣಿಕೆ ಮಾಡಲಾಯಿತು.

ದೇವಸ್ಥಾನ ಸಮಿತಿ ಅಧ್ಯಕ್ಷೆ, ಕಾಳಗಿ ತಹಶೀಲ್ದಾರ್ ನೀಲಪ್ರಭಾ ಬಬಲಾದ ನೇತೃತ್ವದಲ್ಲಿ ಹುಂಡಿ ಪೆಟ್ಟಿಗೆ ತೆರೆದು ಕಂದಾಯ ಇಲಾಖೆ ಸಿಬ್ಬಂದಿ ಹಣ ಎಣಿಕೆ ಮಾಡಿದರು.

₹9,45,560 ನಗದು ಸಂಗ್ರಹವಾಗಿದ್ದು ಅದರಂತೆ ಒಂದು ಬೆಳ್ಳಿ ಖಡ್ಗ, 10ಕ್ಕೂ ಹೆಚ್ಚು ಕಣ್ಬಟ್ಟಲುಗಳು, ಒಂದು ಚಿನ್ನದ ಸುತ್ತುಂಗರು ಕಂಡುಬಂದಿದೆ. ಹುಂಡಿಯ ಈ ಎಲ್ಲವನ್ನು ದೇವಸ್ಥಾನದ ಹೆಬ್ಬಾಳ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು ಎಂದು ತಹಶೀಲ್ದಾರ್ ನೀಲಪ್ರಭಾ ಬಬಲಾದ ತಿಳಿಸಿದ್ದಾರೆ.

ಗ್ರೇಡ್-2 ತಹಶೀಲ್ದಾರ್ ಶಾಂತಗೌಡ ಬಿರಾದಾರ, ಶಿರಸ್ತೆದಾರ ಸಂತೋಷ ಚಂದನಕೇರಾ, ಕಂದಾಯ ನಿರೀಕ್ಷಕ ಕರಬಸಪ್ಪ ಬೆನಕನಳ್ಳಿ, ರೇವಣಸಿದ್ದಯ್ಯ ಹಿರೇಮಠ ಮತ್ತು ವಿವಿಧ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಬ್ಯಾಂಕ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT