ವಿಜಯಪುರ: ಬಿಸಿಲಿನ ಪ್ರಖರತೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಯುವ ಭಾರತ ಸಮಿತಿ ವತಿಯಿಂದ ಕುಡಿಯುವ ನೀರಿನ ಅರವಟಿಗೆ ಸ್ಥಾಪಿಸಲಾಯಿತು.
ನಗರದ ಕಿರಾಣಾ ಬಜಾರ್ದಲ್ಲಿ ಸ್ಥಾಪಿಸಲಾಗಿರುವ ಕುಡಿಯುವ ನೀರಿನ ಅರವಟಿಗೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಯುವ ಭಾರತ ಸಮಿತಿ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ, ಬಿಸಿಲಿನ ಪ್ರಖರತೆ ಈಗಾಗಲೇ ಅಧಿಕವಾಗಿದೆ, ಕುಡಿಯುವ ನೀರಿನ ದಾಹ ಅಧಿಕವಾಗುತ್ತಿದೆ, ಈ ಹಿನ್ನೆಲೆಯಲ್ಲಿ ಜನತೆಗೆ ಕುಡಿಯುವ ನೀರಿನ ದಾಹ ತಣಿಸುವ ದೃಷ್ಟಿಯಿಂದ ಈ ಅರವಟಿಗೆ ಸ್ಥಾಪಿಸಲಾಗಿದೆ ಎಂದರು.
ಜನತೆಯ ಅನುಕೂಲಕ್ಕಾಗಿ ವಿವಿಧ ಭಾಗಗಳಲ್ಲಿ ಈ ಅರವಟಿಗೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ, ಜನ ಸೇವೆಯೇ ಯುವ ಭಾರತ ಸೇವೆಯ ಧ್ಯೇಯವಾಗಿದೆ ಎಂದರು.