ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಕಾರು, ಬಸ್‌ ಡಿಕ್ಕಿ: ನಾಲ್ವರು ಸಾವು

Last Updated 28 ನವೆಂಬರ್ 2021, 16:56 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ಜುಮನಾಳ ಬಳಿ ಕಾರು ಮತ್ತು ಬಸ್‌ ನಡುವೆ ಭಾನುವಾರ ರಾತ್ರಿ ಸಂಭವಿಸಿದ ಡಿಕ್ಕಿಯಲ್ಲಿ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರ ಹಿರಿಯ ಸಹೋದರಿ ಪುತ್ರ ವಿಜಯಕುಮಾರ ಕಾಶಿನಾಥ ದೊಡ್ಡಮನಿ(38) ಸೇರಿದಂತೆ ಸೋಲಾಪುರದ ನಾಂದೇಡದ ಚಿದಾನಂದ ನಾಗೇಶ ಸೂರ್ಯವಂಶಿ (45), ಸೋಲಾಪುರ ರಾಜೂರಿನ ಸೋಮನಾಥ ಕಾಳೆ (43) ಮತ್ತು ಸೋಲಾಪುರ ಬಸವನಗರ ಸಂದೀಪ ಪವಾರ(40) ಸಾವಿಗೀಡಾಗಿದ್ದಾರೆ.

ವಿಜಯಕುಮಾರ ಕಾಶಿನಾಥ ದೊಡ್ಡಮನಿ ಅವರ ಅಂತ್ಯಸಂಸ್ಕಾರ ನಾಳೆ ಬೆಳಿಗ್ಗೆ ಹಿಟ್ಟನಹಳ್ಳಿ ತಾಂಡಾದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT