ಹಂಚಿಕೆ ನಿಜ: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಜಯಪುರ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳಾ, ‘ಬಬಲೇಶ್ವರದಲ್ಲಿ ಮನೆ, ಮನೆಗಳಿಗೆ ಸೀರೆಗಳನ್ನು ಹಂಚಿರುವುದು ನಿಜ. ಫೆ. 22ರಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಬಬಲೇಶ್ವರಕ್ಕೆ ಬರುತ್ತಿದ್ದು, ಅವರ ಅಭಿಮಾನದ ಮೇರೆಗೆ ಅಂದು ಎಲ್ಲ ಸ್ತ್ರೀ ಶಕ್ತಿ ಸಂಘಟನೆಯ ಸದಸ್ಯೆಯರು ಸಮವಸ್ತ್ರದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಹಂಚಿದ್ದೇವೆ. ಚುನಾವಣೆ ಉದ್ದೇಶದಿಂದ ಹಂಚಿಕೆ ಮಾಡಿಲ್ಲ. ಸೀರೆ, ಮೊಬೈಲ್ ಕಾಂಗ್ರೆಸ್ ಮುಖಂಡರಿಗೆ ಸೇರಿದ್ದಲ್ಲ’ ಎಂದು ಹೇಳಿದರು.