<p>ದೇವರಹಿಪ್ಪರಗಿ: ‘ಸಾರ್ಥಕ ಬದುಕಿಗೆ ದೇವರ ದಾಸಿಮಯ್ಯನಂತಹ ಅಸಂಖ್ಯಾತ ಶರಣರ ವಚನಗಳು ದಾರಿ ದೀಪಗಳಾಗಿವೆ’ ಎಂದು ಬಸವ ಶರಣ ಸಂಗಮ ಸೇವಾ ಸಮಿತಿ ತಾಲ್ಲೂಕು ಅಧ್ಯಕ್ಷ ಸಂಗಪ್ಪ ತಡವಲ್ ಹೇಳಿದರು.</p>.<p>ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.</p>.<p>ಸಾರ್ಥಕ ಹಾಗೂ ಸುಂದರ ಬದುಕು ಕಟ್ಟಿಕೊಳ್ಳಲು ಶರಣರ ವಚನಗಳು, ಸಂತರ ಅಭಂಗಗಳು ಹಾಗೂ ದಾಸರ ಪದಗಳು ನಿದರ್ಶನಗಳಾಗಿವೆ ಎಂದರು.</p>.<p>10ನೇ ಶತಮಾನದ ಆದ್ಯವಚನಕಾರ ದೇವರ ದಾಸಿಮಯ್ಯನ ಜೀವನ, ಸಾಧನೆ, ಅಚಲ ಕಾಯಕ ಹಾಗೂ ವಚನಗಳ ಕುರಿತು ವಿವರಿಸಿದರು.</p>.<p>ಉಪತಹಶೀಲ್ದಾರ್ ಸುರೇಶ ಮ್ಯಾಗೇರಿ, ಚಂದ್ರಶೇಖರ ಹೊಸಮನಿ, ನೀಲಕಂಠ ಮಶಾನವರ, ರೇವಣಸಿದ್ಧ ನಂದ್ಯಾಳ ಈರಣ್ಣ ಮಶಾನವರ, ಹನುಮೇಶ ನಂದ್ಯಾಳ, ಸಿಬ್ಬಂದಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260325-26-2029027857</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇವರಹಿಪ್ಪರಗಿ: ‘ಸಾರ್ಥಕ ಬದುಕಿಗೆ ದೇವರ ದಾಸಿಮಯ್ಯನಂತಹ ಅಸಂಖ್ಯಾತ ಶರಣರ ವಚನಗಳು ದಾರಿ ದೀಪಗಳಾಗಿವೆ’ ಎಂದು ಬಸವ ಶರಣ ಸಂಗಮ ಸೇವಾ ಸಮಿತಿ ತಾಲ್ಲೂಕು ಅಧ್ಯಕ್ಷ ಸಂಗಪ್ಪ ತಡವಲ್ ಹೇಳಿದರು.</p>.<p>ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.</p>.<p>ಸಾರ್ಥಕ ಹಾಗೂ ಸುಂದರ ಬದುಕು ಕಟ್ಟಿಕೊಳ್ಳಲು ಶರಣರ ವಚನಗಳು, ಸಂತರ ಅಭಂಗಗಳು ಹಾಗೂ ದಾಸರ ಪದಗಳು ನಿದರ್ಶನಗಳಾಗಿವೆ ಎಂದರು.</p>.<p>10ನೇ ಶತಮಾನದ ಆದ್ಯವಚನಕಾರ ದೇವರ ದಾಸಿಮಯ್ಯನ ಜೀವನ, ಸಾಧನೆ, ಅಚಲ ಕಾಯಕ ಹಾಗೂ ವಚನಗಳ ಕುರಿತು ವಿವರಿಸಿದರು.</p>.<p>ಉಪತಹಶೀಲ್ದಾರ್ ಸುರೇಶ ಮ್ಯಾಗೇರಿ, ಚಂದ್ರಶೇಖರ ಹೊಸಮನಿ, ನೀಲಕಂಠ ಮಶಾನವರ, ರೇವಣಸಿದ್ಧ ನಂದ್ಯಾಳ ಈರಣ್ಣ ಮಶಾನವರ, ಹನುಮೇಶ ನಂದ್ಯಾಳ, ಸಿಬ್ಬಂದಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260325-26-2029027857</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>