ವಿಜಯಪುರ: ತಾಲ್ಲೂಕಿನ ಸಾರವಾಡ ಗ್ರಾಮದಲ್ಲಿ ಈಶ್ವರ ಹಾಗೂ ಮಾರುತಿ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಓಕುಳಿ ಸ್ಪರ್ಧೆ ನಡೆಯಿತು.
ಓಕುಳಿ ಏರುವ ಸ್ಪರ್ಧೆಯಲ್ಲಿ ಸತತ 8ನೇ ಬಾರಿ ಕಂಬ ಏರುವ ಮೂಲಕ ತಳವಾರ ಸಮುದಾಯದ ಯುವಕರು ದಾಖಲೆ ಬರೆದರು.
ಅಂದಾಜು 40 ಅಡಿ ಎತ್ತರದ ಓಕುಳಿ ಕಂಬಕ್ಕೆ ಗೋಧಿ, ಮೈದಾ, ಹಿಟ್ಟಿನ ಕನಕವನ್ನು ನೀರಿನಲ್ಲಿ ನೆನೆಸಿ ಸವರಲಾಗಿತ್ತು. ಅಲ್ಲದೆ, ಹುಣಸೆ ಹಣ್ಣಿನ ಗೊಜ್ಜು ಹಾಗೂ ತುಪ್ಪ ಸವರುವ ಮೂಲಕ ಕಂಬ ಏರಲು ಹರಸಾಹಸ ಪಡುವಂತೆ ಮಾಡಲಾಗಿತ್ತು.
ಸಾಹಸ ಮೆರೆದ ಸ್ಪರ್ಧಾಳು ಭೀಮು ತಳವಾರಗೆ ₹20 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು.