ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮಕ್ಕಳು ಉದ್ಯಮಿಗಳಾಗಲಿ: ನಿರಾಣಿ

ಬಬಲೇಶ್ವರದಲ್ಲಿ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿಯ 54ನೇ ಶಾಖೆ ಆರಂಭ
Last Updated 8 ಫೆಬ್ರುವರಿ 2021, 17:21 IST
ಅಕ್ಷರ ಗಾತ್ರ

ವಿಜಯಪುರ:ರೈತರ ಮಕ್ಕಳು ಉದ್ಯಮಿಗಳಾಗಬೇಕು. ಸ್ಥಳೀಯ ಮಟ್ಟದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಬೇಕು. ಕೃಷಿ, ನೀರಾವರಿ, ಶಿಕ್ಷಣ ನಮ್ಮ ಮೊದಲ ಆದ್ಯತೆಯಾಗಬೇಕು ಎಂದುಸಚಿವ ಮುರುಗೇಶ ನಿರಾಣಿ ಹೇಳಿದರು.

ಬಬಲೇಶ್ವರ ಪಟ್ಟಣದಲ್ಲಿ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿಯ 54ನೇ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.

ಬಬಲೇಶ್ವರ ಜನತೆಯೊಂದಿಗೆ ನನ್ನದು ವಿಶೇಷ ಬಾಂಧವ್ಯವಿದೆ. ಈ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ. ನಿರಾಣಿ ಸಮೂಹದಿಂದ ಸಕ್ಕರೆ, ವಿದ್ಯುತ್, ಈಥೇನಾಲ್, ಸಿಒ2, ಸಿಎನ್‍ಜಿ, ಶಿಕ್ಷಣ, ಬ್ಯಾಂಕಿಂಗ್, ಸೂಪರ ಮಾರ್ಕೆಟ್, ಸಮಾಜ ಸೇವೆ ಎಲ್ಲ ವಿಭಾಗಗಳಲ್ಲಿಯೂ ಸೇವೆ ದೊರೆಯುತ್ತಿದೆ ಎಂದರು.

ಲಕ್ಷಾಂತರ ರೈತ ಕುಟುಂಬಗಳು ಹಾಗೂ ನೌಕರ ಕುಟುಂಬಗಳು ಜೊತೆಯಲ್ಲಿ ನಾಡಿನ ಏಳಿಗೆಗಾಗಿ ದುಡಿಯುತ್ತಿದ್ದೇವೆ ಎಂಬ ಆತ್ಮತೃಪ್ತಿ ನಮ್ಮ ಸಂಸ್ಥೆಗಿದೆ ಎಂದು ಹೇಳಿದರು.

ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಉದ್ಘಾಟಿಸಿ ಮಾತನಾಡಿದಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ನಿರಾಣಿ ಉದ್ಯಮ ಸಮೂಹವು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಅವಳಿ ಜಿಲ್ಲೆಗಳ ಯುವ ಸಮುದಾಯದ ಪಾಲಿಗೆ ವರವಾಗಿದೆ ಎಂದು ಹೇಳಿದರು.

ಸಾಹಸಿ ಉದ್ಯಮಿಯಾಗಿರುವ ಮುರುಗೇಶ ನಿರಾಣಿ ಸಕ್ಕರೆ ಕಾರ್ಖಾನೆಗಳನ್ನು ಕಟ್ಟುವ ಮೂಲಕ ರೈತರ ಬೆಳೆಗೆ ಸದೃಢ ಮಾರುಕಟ್ಟೆ ಕಲ್ಪಿಸಿದ್ದಾರೆ ಎಂದರು.

ಬಬಲೇಶ್ವರ ಭಾಗದ ಆರ್ಥಿಕ ಚಟುವಟಿಕೆಗಳಿಗೆ ದೈನಂದಿನ ವ್ಯವಹಾರಗಳಿಗೆ ವಿಜಯ ಸಹಕಾರಿಯು ಸಹಕಾರಿಯಾಗಲಿದೆ ಎಂದು ಹೇಳಿದರು.

ಇಡೀ ಜಗತ್ತು ಕೊರೊನಾದಿಂದ ತತ್ತರಿಸಿ ಮನೆಯಲ್ಲಿ ಕುಳಿತಿದ್ದ ವೇಳೆಯಲ್ಲಿ ಮುರುಗೇಶ ನಿರಾಣಿ ಅವರು ಸ್ಥಗಿತಗೊಂಡ ಕೈಗಾರಿಕೆಗಳಿಗೆ ಮರುಜೀವ ನೀಡಿ ಹೊಸ ಉದ್ಯೋಗಳನ್ನು ಸೃಷ್ಠಿಸಿದ್ದಾರೆ ಎಂದರು.

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ಮುರುಗೇಶ ನಿರಾಣಿಯವರ ಸ್ವಭಾವ ಹಾಗೂ ಗುಣಕ್ಕೆ ಯಶಸ್ಸು ಸಿದ್ದಿಸಿದೆ. ಶ್ರೀಮಂತಿಕೆ, ಪದವಿಯನ್ನು ಮೀರಿದ ಸರಳತೆ ಅವರಲ್ಲಿದೆ. ಹೀಗಾಗಿ ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಅವರ ಸಂಸ್ಥೆಯಿಂದ ರೈತರಿಗೆ ಈ ನಾಡಿಗೆ ಮತ್ತಷ್ಟು ಒಳ್ಳೆಯದಾಗಲಿ ಎಂದರು.

ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಮುರುಗೇಶ ನಿರಾಣಿ ಅವರನ್ನು ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ವಿವಿಧ ಸಂಘ ಸಂಸ್ಥೆಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರಮುಖರು ಸಚಿವರನ್ನು ಸನ್ಮಾನ ಮಾಡಿದರು.

ಎಂ.ಎಚ್. ಪತ್ತೆನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಪಾದೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯ ಸಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಮೇಶ ಕೋಳಕೂರ, ಸುರೇಶ ಬಿರಾದರ, ದೇವಾನಂದ ಸಿ. ಆಲಗೊಂಡ, ಶೇಖಪ್ಪ ಕೊಪ್ಪದ, ಬೋರಮ್ಮ ಬೂದಿಹಾಳ, ಬಸವರಾಜ ಶಿರಮಗೊಂಡ, ಮಲ್ಲಪ್ಪ ಕೋಟಿಹಾಳ, ಮನೋಹರ ಜಂಗಮಶೆಟ್ಟಿ, ಸಂಗಪ್ಪ ತಿಮ್ಮಶೆಟ್ಟಿ, ಮೊಹನ ಜಾದವ, ಜಗದೀಶ ಶಿರಾಳಶೆಟ್ಟಿ, ಅರ್ಜುನ ದೇವಕ್ಕಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT