ವಿಜಯಪುರ: ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಉತ್ತರ ಕರ್ನಾಟದ ರೈತ ಸಮುದಾಯ ತತ್ತರಿಸಿ ಹೋಗಿದೆ. ರೈತರ ಸಂಕಷ್ಟ ಪರಿಸ್ಥಿತಿಯನ್ನು ಹಾಡಿನ ರೂಪದಲ್ಲಿ ಹಂಚಿಕೊಂಡಿರುವ ವಿಡಿಯೊ ವಿಜಯಪುರ ಜಿಲ್ಲೆಯ ವಾಟ್ಸಾಪ್ ಗ್ರೂಪ್ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೈತರೊಬ್ಬರು ಕಬ್ಬಿನ ಹೊಲದಲ್ಲಿ ನಿಂತು ರೈತರ ಗೋಳಿನ ಕಥೆಯನ್ನು ಜಾನಪದ ಶೈಲಿಯಲ್ಲಿ ಮನಮುಟ್ಟುವಂತೆ ಹಾಡಿದ್ದಾರೆ.
'ರೈತರ ಈ ಗೋಳ... ಕೇಳುವವರಾರಿಲ್ಲ.. ಈ ಜಗದೊಳ.... ರೈತ ಏನ ಮಾಡಿದಾನ ತಪ್ಪಾ... ಯಾವ ದೇವರದೈತೊ ಶಾಪಾ...'
ಎಂಬ ಈ ರೈತ ಗೀತೆಯಲ್ಲಿಮಳೆಯಿಂದ ಆಗಿರುವ ಬೆಳೆಹಾನಿಯ ಜೊತೆಗೆ ಸರ್ಕಾರ ಸ್ಪಂದಿಸದೇ ಇರುವ ಬಗ್ಗೆ ಸಿಟ್ಟು... ದೇವರ ಬಗ್ಗೆ ಕೋಪವೈ ಅಭಿವ್ಯಕ್ತಿಗೊಂಡಿದೆ.
ಹಾಡಿರುವ ರೈತ ಯಾರು, ಯಾವ ಊರು ಎಂಬುದು ತಿಳಿದುಬಂದಿಲ್ಲ.
ಕಬ್ಬಿನ ಹೊಲದಲ್ಲಿ ನಿಂತು ರೈತರ ಸಮಸ್ಯೆಯನ್ನು ಹಾಡಿನ ರೂಪದಲ್ಲಿ ಕಟ್ಟಿಕೊಟ್ಟಿರುವ ಹಾಡು ವಿಜಯಪುರ ಜಿಲ್ಲೆಯ ವಾಟ್ಸಾಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದೆ. #FarmersDistresspic.twitter.com/CjdmJYg3Oe