<p><strong>ದೇವರಹಿಪ್ಪರಗಿ: ಬ</strong>ರಡು ಭೂಮಿಯನ್ನು ಖರೀದಿಸಿ ಅದನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡಿರುವ ನಿವೃತ್ತ ಶಿಕ್ಷಕ ಶಾಂತಪ್ಪ ಹರಳಯ್ಯ ಅವರು ನೆಮ್ಮದಿಯ ಬದುಕಿಗಾಗಿ ಕೃಷಿಯ ಮೊರೆ ಹೋಗಿದ್ದಾರೆ.</p>.<p>ಪಟ್ಟಣದಲ್ಲಿ ಪಡನೂರ ಸರ್ ಎಂದೇ ಚಿರಪರಿಚಿತರಾದ ಶಾಂತಪ್ಪ ಹರಳಯ್ಯ ಅವರ ಪತ್ನಿ ಸಹ ಶಿಕ್ಷಕಿ. ಒಬ್ಬ ಪುತ್ರ ಎಂ.ಎಸ್ ಆರ್ಥೋ ವೈದ್ಯ, ಇನ್ನೊಬ್ಬ ಎಂಜನಿಯರ್, ಇಬ್ಬರು ಪುತ್ರಿಯರು ಎಂಜನೀಯರ್ಗಳು. ಮನಸ್ಸು ಮಾಡಿದ್ದರೇ ಆರಾಮವಾಗಿ ಮನೆಯಲ್ಲಿ ಕುಳಿತು ಕಳೆಯಬಹುದಾದ ಜೀವನ. ಆದರೆ ಕೃಷಿ ಪ್ರೀತಿ ಇವರನ್ನು ಭೂಕಾಯಕದಲ್ಲಿ ತೊಡಗಿಸಿದೆ.</p>.<p>ಇವರು ಮೂಲತಃ ಇಂಡಿ ತಾಲ್ಲೂಕು ಪಡನೂರ ಗ್ರಾಮದವನು. ದೇವರಹಿಪ್ಪರಗಿ ತಾಲ್ಲೂಕಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ 2021-22ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಕಲ್ಲು ಬಂಡೆಗಳಿಂದ ಕೂಡಿದ 8 ಎಕರೆ ಮರಡಿ ಜಮೀನನ್ನು ಖರೀದಿಸಿದರು. ಜಮೀನಿನಲ್ಲಿಯ ಕಲ್ಲುಗಳನ್ನು ತೆಗೆಸಿ 3 ಅಡಿ ಕರಿಮಣ್ಣನ್ನು ಹಾಕಿ ಸಮತಟ್ಟಗೊಳಿಸಿದರು. ಇದಕ್ಕೆ ಅಂದಾಜು ₹ 20 ಲಕ್ಷ ಖರ್ಚಾಯಿತು. ನಂತರ ₹ 5.50 ಲಕ್ಷ ವೆಚ್ಚದಲ್ಲಿ ನೀರಿಗಾಗಿ ಬಾವಿ ತೊಡಿಸಿ ಸುತ್ತಲೂ ತಡೆಗೋಡೆ ನಿರ್ಮಿಸಿದರು. ನಂತರ 6 ಎಕರೆ ಭೂಮಿಯಲ್ಲಿ 500 ಮಾವು, 50 ನೇರಳೆ, 10 ಬಿಳಿನೇರಳೆ, 60 ತೆಂಗು, 05 ಬೆಟ್ಟದ ನೆಲ್ಲಿ, 40 ಬಾರಾಮಸಿ ಎನ್ನುವ ವರ್ಷಪೂರ್ತಿ ಹಣ್ಣು ನೀಡುವ ಮಾವು, 100 ಪೇರಲ, 20 ಯಾಲಕ್ಕಿ ಬಾಳೆ, 05 ರಾಮಫಲ, 200 ನುಗ್ಗೆ ಹಾಗೂ ಪಾರಿಜಾತದ ಗಿಡಗಳನ್ನು ಬೆಳೆಸಲಾಯಿತು. ಇವುಗಳಲ್ಲಿ ಈಗಾಗಲೇ ಮಾವು, ಪೇರಲ, ಬಾಳೆ, ರಾಮಫಲ ಹಣ್ಣು ಬಿಡುತ್ತಿವೆ.</p>.<p>ಹಣ್ಣಿನ ಗಿಡಗಳನ್ನು ರಾಸಾಯನಿಕ ಮುಕ್ತವಾಗಿಸಿ ಸಾವಯವ ಪದ್ಧತಿ ಮೂಲಕ ಬೆಳೆಯಲು ಅನುಕೂಲವಾಗುವಂತೆ ಮೂರು ಆಕಳುಗಳನ್ನು ಸಾಕಿದ್ದಾರೆ. ಇವುಗಳಿಂದ ಮುಖ್ಯವಾಗಿ ಗೋಕಾಮೃತ ಹಾಗೂ ಜೀವಾಮೃತವನ್ನು ತಯಾರಿಸಲಾಗುತ್ತಿದೆ. ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ.</p>.<p>‘ಕೃಷಿಯಲ್ಲಿ ಎಂದಿಗೂ ಒಂದೇ ಬಾರಿ ಲಾಭ ನಿರೀಕ್ಷಿಸಬಾರದು. ನಾನು ಲಾಭದ ಆಸೆಯಿಂದ ಕೃಷಿ ಮಾಡುತ್ತಿಲ್ಲ. ಈಗ ಉಳಿದ 2 ಎಕರೆಯಲ್ಲಿ ಪ್ರತಿವರ್ಷ ತೊಗರಿ ಸೇರಿದಂತೆ ಇತರ ಬೆಳೆ ಬೆಳೆಯುತ್ತಿದ್ದೇನೆ. ತೊಗರಿಯಿಂದ ಈ ಬಾರಿ ₹ 50 ಸಾವಿರ ಆದಾಯ ಬಂದಿರಬಹುದು. ಆದರೆ ನಾನೆಂದೂ ಆ ಕುರಿತು ತಲೆಕೆಡಿಸಿಕೊಂಡಿಲ್ಲ. ಬೆಳಿಗ್ಗೆ ಇಲ್ಲಿಗೆ ಬಂದು ಕೆಲಸದಲ್ಲಿ ತೊಡಗಿಸಿಕೊಂಡರೇ ಸಮಯ ಕಳೆದಿದ್ದೇ ಗೊತ್ತಾಗುವುದಿಲ್ಲ. ನನ್ನ ಕೃಷಿ ಕಾರ್ಯಗಳಿಗೆ ನೆರವಾಗಲು ಒಬ್ಬ ಸಹಾಯಕ ಇದ್ದಾನೆ. ವಿಶ್ರಾಂತಿಗಾಗಿ ಚಿಕ್ಕ ಮನೆ ನಿರ್ಮಿಸಿದ್ದೇನೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವರಹಿಪ್ಪರಗಿ: ಬ</strong>ರಡು ಭೂಮಿಯನ್ನು ಖರೀದಿಸಿ ಅದನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡಿರುವ ನಿವೃತ್ತ ಶಿಕ್ಷಕ ಶಾಂತಪ್ಪ ಹರಳಯ್ಯ ಅವರು ನೆಮ್ಮದಿಯ ಬದುಕಿಗಾಗಿ ಕೃಷಿಯ ಮೊರೆ ಹೋಗಿದ್ದಾರೆ.</p>.<p>ಪಟ್ಟಣದಲ್ಲಿ ಪಡನೂರ ಸರ್ ಎಂದೇ ಚಿರಪರಿಚಿತರಾದ ಶಾಂತಪ್ಪ ಹರಳಯ್ಯ ಅವರ ಪತ್ನಿ ಸಹ ಶಿಕ್ಷಕಿ. ಒಬ್ಬ ಪುತ್ರ ಎಂ.ಎಸ್ ಆರ್ಥೋ ವೈದ್ಯ, ಇನ್ನೊಬ್ಬ ಎಂಜನಿಯರ್, ಇಬ್ಬರು ಪುತ್ರಿಯರು ಎಂಜನೀಯರ್ಗಳು. ಮನಸ್ಸು ಮಾಡಿದ್ದರೇ ಆರಾಮವಾಗಿ ಮನೆಯಲ್ಲಿ ಕುಳಿತು ಕಳೆಯಬಹುದಾದ ಜೀವನ. ಆದರೆ ಕೃಷಿ ಪ್ರೀತಿ ಇವರನ್ನು ಭೂಕಾಯಕದಲ್ಲಿ ತೊಡಗಿಸಿದೆ.</p>.<p>ಇವರು ಮೂಲತಃ ಇಂಡಿ ತಾಲ್ಲೂಕು ಪಡನೂರ ಗ್ರಾಮದವನು. ದೇವರಹಿಪ್ಪರಗಿ ತಾಲ್ಲೂಕಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ 2021-22ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಕಲ್ಲು ಬಂಡೆಗಳಿಂದ ಕೂಡಿದ 8 ಎಕರೆ ಮರಡಿ ಜಮೀನನ್ನು ಖರೀದಿಸಿದರು. ಜಮೀನಿನಲ್ಲಿಯ ಕಲ್ಲುಗಳನ್ನು ತೆಗೆಸಿ 3 ಅಡಿ ಕರಿಮಣ್ಣನ್ನು ಹಾಕಿ ಸಮತಟ್ಟಗೊಳಿಸಿದರು. ಇದಕ್ಕೆ ಅಂದಾಜು ₹ 20 ಲಕ್ಷ ಖರ್ಚಾಯಿತು. ನಂತರ ₹ 5.50 ಲಕ್ಷ ವೆಚ್ಚದಲ್ಲಿ ನೀರಿಗಾಗಿ ಬಾವಿ ತೊಡಿಸಿ ಸುತ್ತಲೂ ತಡೆಗೋಡೆ ನಿರ್ಮಿಸಿದರು. ನಂತರ 6 ಎಕರೆ ಭೂಮಿಯಲ್ಲಿ 500 ಮಾವು, 50 ನೇರಳೆ, 10 ಬಿಳಿನೇರಳೆ, 60 ತೆಂಗು, 05 ಬೆಟ್ಟದ ನೆಲ್ಲಿ, 40 ಬಾರಾಮಸಿ ಎನ್ನುವ ವರ್ಷಪೂರ್ತಿ ಹಣ್ಣು ನೀಡುವ ಮಾವು, 100 ಪೇರಲ, 20 ಯಾಲಕ್ಕಿ ಬಾಳೆ, 05 ರಾಮಫಲ, 200 ನುಗ್ಗೆ ಹಾಗೂ ಪಾರಿಜಾತದ ಗಿಡಗಳನ್ನು ಬೆಳೆಸಲಾಯಿತು. ಇವುಗಳಲ್ಲಿ ಈಗಾಗಲೇ ಮಾವು, ಪೇರಲ, ಬಾಳೆ, ರಾಮಫಲ ಹಣ್ಣು ಬಿಡುತ್ತಿವೆ.</p>.<p>ಹಣ್ಣಿನ ಗಿಡಗಳನ್ನು ರಾಸಾಯನಿಕ ಮುಕ್ತವಾಗಿಸಿ ಸಾವಯವ ಪದ್ಧತಿ ಮೂಲಕ ಬೆಳೆಯಲು ಅನುಕೂಲವಾಗುವಂತೆ ಮೂರು ಆಕಳುಗಳನ್ನು ಸಾಕಿದ್ದಾರೆ. ಇವುಗಳಿಂದ ಮುಖ್ಯವಾಗಿ ಗೋಕಾಮೃತ ಹಾಗೂ ಜೀವಾಮೃತವನ್ನು ತಯಾರಿಸಲಾಗುತ್ತಿದೆ. ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ.</p>.<p>‘ಕೃಷಿಯಲ್ಲಿ ಎಂದಿಗೂ ಒಂದೇ ಬಾರಿ ಲಾಭ ನಿರೀಕ್ಷಿಸಬಾರದು. ನಾನು ಲಾಭದ ಆಸೆಯಿಂದ ಕೃಷಿ ಮಾಡುತ್ತಿಲ್ಲ. ಈಗ ಉಳಿದ 2 ಎಕರೆಯಲ್ಲಿ ಪ್ರತಿವರ್ಷ ತೊಗರಿ ಸೇರಿದಂತೆ ಇತರ ಬೆಳೆ ಬೆಳೆಯುತ್ತಿದ್ದೇನೆ. ತೊಗರಿಯಿಂದ ಈ ಬಾರಿ ₹ 50 ಸಾವಿರ ಆದಾಯ ಬಂದಿರಬಹುದು. ಆದರೆ ನಾನೆಂದೂ ಆ ಕುರಿತು ತಲೆಕೆಡಿಸಿಕೊಂಡಿಲ್ಲ. ಬೆಳಿಗ್ಗೆ ಇಲ್ಲಿಗೆ ಬಂದು ಕೆಲಸದಲ್ಲಿ ತೊಡಗಿಸಿಕೊಂಡರೇ ಸಮಯ ಕಳೆದಿದ್ದೇ ಗೊತ್ತಾಗುವುದಿಲ್ಲ. ನನ್ನ ಕೃಷಿ ಕಾರ್ಯಗಳಿಗೆ ನೆರವಾಗಲು ಒಬ್ಬ ಸಹಾಯಕ ಇದ್ದಾನೆ. ವಿಶ್ರಾಂತಿಗಾಗಿ ಚಿಕ್ಕ ಮನೆ ನಿರ್ಮಿಸಿದ್ದೇನೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>