<p><strong>ವಿಜಯಪುರ</strong>: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಚಡಚಣ ತಾಲ್ಲೂಕಿನ ಗೋವಿಂದಪುರದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ವಾರ ನಡೆದಿದ್ದ ಆರು ಜನರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನ ಆರೋಪಿಗಳನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.</p><p>ಕೊಲೆ ಪ್ರಕರಣದ ಮುಖ್ಯ ಆರೋಪಿ ಕಲ್ಲನಗೌಡ ಪಾಟೀಲ ಸೇರಿದಂತೆ ಅಪ್ಪುಗೌಡ ಪಾಟೀಲ, ಈಶ್ವರಪ್ಪ ಪಾಟೀಲ, ಪ್ರಕಾಶ ಪಾಟೀಲ, ಪ್ರಶಾಂತ ಪಾಟೀಲ, ಸಿದ್ದರಾಮ ಪಾಟೀಲ, ಲಾಯಪ್ಪ ಬಿರಾದಾರ, ಚಿದಾನಂದ ಟಕ್ಕಳಕಿ, ಮಾಸಿದ್ದ ಬಿರಾದಾರ, ಶ್ರೀಮಂತ ಬಿರಾದಾರ, ಸಣ್ಣಕರೆಪ್ಪ ಅರಕೇರಿ ಮತ್ತು ಅಪ್ಪಸಾಬ್ ಬೋವಿ ಅವರನ್ನು ಬಂಧಿಸಲಾಗಿದೆ.</p>.ಆಸ್ತಿ ವಿವಾದ: ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ 6 ಜನರ ಕೊಲೆ.ಗೋವಿಂದಪುರ ಕೊಲೆ ಪ್ರಕರಣ: ಸಾಮೂಹಿಕ ಅಂತ್ಯ ಸಂಸ್ಕಾರ.<p>'ಬಂಧಿತ 12 ಆರೋಪಿಗಳನ್ನು ಇಂಡಿ ಕೋರ್ಟ್ ಗೆ ಸೋಮವಾರ ಹಾಜರು ಪಡಿಸಲಾಗುವುದು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.</p><p><strong>ಪ್ರಕರಣ ವಿವರ</strong></p><p>ಚಡಚಣ ತಾಲ್ಲೂಕಿನ ಭೀಮಾ ನದಿ ತೀರದ ಗೋವಿಂದಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಕಳೆದ ಶುಕ್ರವಾರ ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು.</p><p>ಚಡಚಣ ಪಟ್ಟಣದ ಒಂದೇ ಕುಟುಂಬಕ್ಕೆ ಸೇರಿದ ದುಂಡಪ್ಪ ರೇವಣ ಸಿದ್ದಪ್ಪ ನಿರಾಳೆ(65), ಶಿವಪುತ್ರ ರೇವಣ ಸಿದ್ದಪ್ಪ ನಿರಾಳೆ(58), ಚಂದ್ರಕಾಂತ ಅಲಿಯಾಸ್</p><p>ಚಂದು ರೇವಣಸಿದ್ದಪ್ಪ ನಿರಾಳೆ(55), ರಾಹುಲ್ ಶಿವಪುತ್ರ ನಿರಾಳೆ(25), ಸಮರ್ಥ ಶಿವಪುತ್ರ ನಿರಾಳೆ(23) ಹಾಗೂ ಚಡಚಣದ ಶಬ್ಬೀರ್ ಬಾಬುಸಾಬ ಅತ್ತಾರ(45) ಕೊಲೆಯಾಗಿದ್ದರು.</p><p>ಘಟನೆಯಲ್ಲಿ ದೂಸೂರ ಗ್ರಾಮದ ಅರವಿಂದ ಕಟಗಿ(72), ಕಾತ್ರಾಳ ಗ್ರಾಮದ ಜೆಸಿಬಿ ಚಾಲಕ ಸಂದೀಪ ಮಾನೆ (23) ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p><p>ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಒಳಗಾಗಿರುವ ಶಶಿಕಾಂತ ತೇಲಿ ಕುಟುಂಬಕ್ಕೆ ಸೇರಿದ ಸುಮಾರು 25 ಎಕರೆ ಜಮೀನನ್ನು ನಿರಾಳೆ ಕುಟುಂಬದವರು ಖರೀದಿಸಿರುವುದೇ ಈ ಘಟನೆಗೆ ಕಾರಣವಾಗಿತ್ತು.</p><p>ಕೊಲೆ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಪೊಲೀಸರು ತಂಡ ರಚಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಚಡಚಣ ತಾಲ್ಲೂಕಿನ ಗೋವಿಂದಪುರದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ವಾರ ನಡೆದಿದ್ದ ಆರು ಜನರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನ ಆರೋಪಿಗಳನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.</p><p>ಕೊಲೆ ಪ್ರಕರಣದ ಮುಖ್ಯ ಆರೋಪಿ ಕಲ್ಲನಗೌಡ ಪಾಟೀಲ ಸೇರಿದಂತೆ ಅಪ್ಪುಗೌಡ ಪಾಟೀಲ, ಈಶ್ವರಪ್ಪ ಪಾಟೀಲ, ಪ್ರಕಾಶ ಪಾಟೀಲ, ಪ್ರಶಾಂತ ಪಾಟೀಲ, ಸಿದ್ದರಾಮ ಪಾಟೀಲ, ಲಾಯಪ್ಪ ಬಿರಾದಾರ, ಚಿದಾನಂದ ಟಕ್ಕಳಕಿ, ಮಾಸಿದ್ದ ಬಿರಾದಾರ, ಶ್ರೀಮಂತ ಬಿರಾದಾರ, ಸಣ್ಣಕರೆಪ್ಪ ಅರಕೇರಿ ಮತ್ತು ಅಪ್ಪಸಾಬ್ ಬೋವಿ ಅವರನ್ನು ಬಂಧಿಸಲಾಗಿದೆ.</p>.ಆಸ್ತಿ ವಿವಾದ: ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ 6 ಜನರ ಕೊಲೆ.ಗೋವಿಂದಪುರ ಕೊಲೆ ಪ್ರಕರಣ: ಸಾಮೂಹಿಕ ಅಂತ್ಯ ಸಂಸ್ಕಾರ.<p>'ಬಂಧಿತ 12 ಆರೋಪಿಗಳನ್ನು ಇಂಡಿ ಕೋರ್ಟ್ ಗೆ ಸೋಮವಾರ ಹಾಜರು ಪಡಿಸಲಾಗುವುದು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.</p><p><strong>ಪ್ರಕರಣ ವಿವರ</strong></p><p>ಚಡಚಣ ತಾಲ್ಲೂಕಿನ ಭೀಮಾ ನದಿ ತೀರದ ಗೋವಿಂದಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಕಳೆದ ಶುಕ್ರವಾರ ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು.</p><p>ಚಡಚಣ ಪಟ್ಟಣದ ಒಂದೇ ಕುಟುಂಬಕ್ಕೆ ಸೇರಿದ ದುಂಡಪ್ಪ ರೇವಣ ಸಿದ್ದಪ್ಪ ನಿರಾಳೆ(65), ಶಿವಪುತ್ರ ರೇವಣ ಸಿದ್ದಪ್ಪ ನಿರಾಳೆ(58), ಚಂದ್ರಕಾಂತ ಅಲಿಯಾಸ್</p><p>ಚಂದು ರೇವಣಸಿದ್ದಪ್ಪ ನಿರಾಳೆ(55), ರಾಹುಲ್ ಶಿವಪುತ್ರ ನಿರಾಳೆ(25), ಸಮರ್ಥ ಶಿವಪುತ್ರ ನಿರಾಳೆ(23) ಹಾಗೂ ಚಡಚಣದ ಶಬ್ಬೀರ್ ಬಾಬುಸಾಬ ಅತ್ತಾರ(45) ಕೊಲೆಯಾಗಿದ್ದರು.</p><p>ಘಟನೆಯಲ್ಲಿ ದೂಸೂರ ಗ್ರಾಮದ ಅರವಿಂದ ಕಟಗಿ(72), ಕಾತ್ರಾಳ ಗ್ರಾಮದ ಜೆಸಿಬಿ ಚಾಲಕ ಸಂದೀಪ ಮಾನೆ (23) ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p><p>ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಒಳಗಾಗಿರುವ ಶಶಿಕಾಂತ ತೇಲಿ ಕುಟುಂಬಕ್ಕೆ ಸೇರಿದ ಸುಮಾರು 25 ಎಕರೆ ಜಮೀನನ್ನು ನಿರಾಳೆ ಕುಟುಂಬದವರು ಖರೀದಿಸಿರುವುದೇ ಈ ಘಟನೆಗೆ ಕಾರಣವಾಗಿತ್ತು.</p><p>ಕೊಲೆ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಪೊಲೀಸರು ತಂಡ ರಚಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>