<p><strong>ವಿಜಯಪುರ:</strong> ‘ಕಾವ್ಯ ರಚನೆ ಎಲ್ಲರಿಂದಲೂ ಸಾಧ್ಯವಿಲ್ಲ, ಕಾವ್ಯ ರಚನೆ ಕಠಿಣವಾದ ಕೆಲಸ, ಕಾವ್ಯ ರಚನೆಗೆ ಶಬ್ದ ಸಂಗ್ರಹ, ಶಬ್ದಗಳ ಅರಿಕೆ ಮತ್ತು ಸಂದರ್ಭಾನುಸಾರ ಕಾವ್ಯದಲ್ಲಿ ಅವುಗಳ ಬಳಸಿಕೊಳ್ಳುವುದು ಗೊತ್ತಿರಬೇಕಾಗುತ್ತದೆ’ ಎಂದು ತ್ರಿಭಾಷ ಸಾಹಿತಿ ಜಿ.ಆರ್. ಕುಲಕರ್ಣಿ ಹೇಳಿದರು.</p>.<p>ನಗರದ ದೀವಟಗೇರಿ ರಾಯರ ಮಠದಲ್ಲಿ ರವಿವಾರ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಿಜಯಪುರ ಜಿಲ್ಲಾ ಸಮಿತಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.</p>.<p>ಪ್ರೊ. ಚಿದಂಬರ ಪಾಟೀಲ ಮಾತನಾಡಿ, ಉತ್ತರ ಕರ್ನಾಟಕ ಸಾಹಿತ್ಯಗಳ ಬಗ್ಗೆ ಸಂಶೋಧನೆಯಾಗಬೇಕೆಂದು ಆಶಯ ವ್ಯಕ್ತಪಡಿಸಿದರು.</p>.<p>ರೇಖಾ ಮುತಾಲಿಕ ಅವರ ಕಥಾ ಕುಸುಮಗಳು ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ಪ್ರಭಾಕ ಖೇಡದ ಹಾಗೂ ರೇಖಾ ಗೋಗಿ ಪುಸ್ತಕವನ್ನು ಪರಿಚಯಿಸಿದರು.</p>.<p>ಅಭಾಸಾಪ ಜಿಲ್ಲಾ ಸಮಿತಿ ಏರ್ಪಡಿಸಿದ್ದ ಕವನ ಸ್ಪರ್ಧೆ ವಿಜೇತರಿಗೆ ಪುಸ್ತಕ ಬಹುಮಾನ ಕೊಡಲಾಯಿತು. ಕವಿಗೋಷ್ಠಿಯಲ್ಲಿ 25ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು.</p>.<p>ವಿವೇಕ ಕುಲಕರ್ಣಿ, ಶ್ರೀರಂಗ ಕುಲಕರ್ಣಿ, ಗಂಗಾಧರ ಪವಾಡ ಶೆಟ್ಟಿ, ಖುಷಿ, ಮಯೂರ ತಿಳಗೂಳಕರ, ಸುಕಾಂತ ಕುಲಕರ್ಣಿ, ಬಳವಂತ ಕುಲಕರ್ಣಿ, ಶ್ರೀರಂಗ ಪುರಾಣಿಕ, ಅನಿಲ ಬಳ್ಳುಂಡಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ‘ಕಾವ್ಯ ರಚನೆ ಎಲ್ಲರಿಂದಲೂ ಸಾಧ್ಯವಿಲ್ಲ, ಕಾವ್ಯ ರಚನೆ ಕಠಿಣವಾದ ಕೆಲಸ, ಕಾವ್ಯ ರಚನೆಗೆ ಶಬ್ದ ಸಂಗ್ರಹ, ಶಬ್ದಗಳ ಅರಿಕೆ ಮತ್ತು ಸಂದರ್ಭಾನುಸಾರ ಕಾವ್ಯದಲ್ಲಿ ಅವುಗಳ ಬಳಸಿಕೊಳ್ಳುವುದು ಗೊತ್ತಿರಬೇಕಾಗುತ್ತದೆ’ ಎಂದು ತ್ರಿಭಾಷ ಸಾಹಿತಿ ಜಿ.ಆರ್. ಕುಲಕರ್ಣಿ ಹೇಳಿದರು.</p>.<p>ನಗರದ ದೀವಟಗೇರಿ ರಾಯರ ಮಠದಲ್ಲಿ ರವಿವಾರ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಿಜಯಪುರ ಜಿಲ್ಲಾ ಸಮಿತಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.</p>.<p>ಪ್ರೊ. ಚಿದಂಬರ ಪಾಟೀಲ ಮಾತನಾಡಿ, ಉತ್ತರ ಕರ್ನಾಟಕ ಸಾಹಿತ್ಯಗಳ ಬಗ್ಗೆ ಸಂಶೋಧನೆಯಾಗಬೇಕೆಂದು ಆಶಯ ವ್ಯಕ್ತಪಡಿಸಿದರು.</p>.<p>ರೇಖಾ ಮುತಾಲಿಕ ಅವರ ಕಥಾ ಕುಸುಮಗಳು ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ಪ್ರಭಾಕ ಖೇಡದ ಹಾಗೂ ರೇಖಾ ಗೋಗಿ ಪುಸ್ತಕವನ್ನು ಪರಿಚಯಿಸಿದರು.</p>.<p>ಅಭಾಸಾಪ ಜಿಲ್ಲಾ ಸಮಿತಿ ಏರ್ಪಡಿಸಿದ್ದ ಕವನ ಸ್ಪರ್ಧೆ ವಿಜೇತರಿಗೆ ಪುಸ್ತಕ ಬಹುಮಾನ ಕೊಡಲಾಯಿತು. ಕವಿಗೋಷ್ಠಿಯಲ್ಲಿ 25ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು.</p>.<p>ವಿವೇಕ ಕುಲಕರ್ಣಿ, ಶ್ರೀರಂಗ ಕುಲಕರ್ಣಿ, ಗಂಗಾಧರ ಪವಾಡ ಶೆಟ್ಟಿ, ಖುಷಿ, ಮಯೂರ ತಿಳಗೂಳಕರ, ಸುಕಾಂತ ಕುಲಕರ್ಣಿ, ಬಳವಂತ ಕುಲಕರ್ಣಿ, ಶ್ರೀರಂಗ ಪುರಾಣಿಕ, ಅನಿಲ ಬಳ್ಳುಂಡಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>