ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದಆಲಮಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಹಿರೇಮಠ, ‘ಸ್ಮಾರಕ ನಿರ್ವಹಣೆಗೆ ಸಮಿತಿ ರಚಿಸಿ, ಅದರ ಮೂಲಕ ವಿವಿಧ ಸೃಜನಾತ್ಮಕ ಕಾರ್ಯಚಟುವಟಿಕೆ ನಡೆಸಬೇಕು. ಮಂಜಪ್ಪನವರ ಕೃತಿಗಳ ಮರುಮುದ್ರಣ, ಅವರು ಬಳಿಸಿದ ಪ್ರಿಂಟಿಂಗ್ ಪ್ರೆಸ್ ಸೇರಿ ನಾನಾ ವಸ್ತುಗಳ ಸಂಗ್ರಹ, ಅವರ ಬದುಕನ್ನು ಕಲೆಗಳ ಮೂಲಕ ಅನಾವರಣಗೊಳಿಸುವ ಪ್ರಯತ್ನ ನಡೆಯಬೇಕಿದೆ’ ಎಂದು ಹೇಳಿದರು.