ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದಲೇ ರಭಸದ ಗಾಳಿಯೊಂದಿಗೆ ಮಳೆಯಾಗತೊಡಗಿದೆ.
ವಿಜಯಪುರ, ಆಲಮಟ್ಟಿ, ನಿಡಗುಂದಿ, ತಿಕೋಟಾ, ಸಿಂದಗಿ, ಕೊಲ್ಹಾರ ಭಾಗದಲ್ಲಿ ಉತ್ತಮ ಮಳೆಯಾಗತೊಡಗಿದೆ.
ನಿನ್ನೆಯಿಂದ ವೇಗವಾಗಿ ಗಾಳಿ ಬೀಸುತ್ತಿದ್ದು, ಇಂದು ದಟ್ಟವಾದ ಮೋಡ ಕವಿದ ವಾತಾವರಣವಿದೆ. ಆಗಾಗ ಬಿಟ್ಟುಬಿಟು ಮಳೆ ಸುರಿಯತೊಡಗಿದೆ. ಕೆಲ ಹೊಲದಲ್ಲೂ ನೀರು ನಿಂತಿದ್ದು, ಬೆಳೆಗೆ ಹಾನಿಯಾಗುವ ಆತಂಕ ರೈತರದ್ದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.